Subscribe to Updates
Get the latest creative news from FooBar about art, design and business.
Author: chandrakant
2025ರ ಏಷ್ಯಾಕಪ್ನಲ್ಲಿ ಯಂಗ್ ಅಂಡ್ ಎನರ್ಜಿಟಿಕ್ ಟೀಂ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.. ವಿಮರ್ಶೆ, ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ.. ಪ್ರತಿಯೊಬ್ಬ ಆಟಗಾರನೂ ಮಿಂಚಿ ಭೋರ್ಗರೆದ ಪರಿಣಾಮ ಭಾರತ ತಂಡ ಸತತ 9ನೇ ಬಾರಿಗೆ ಏಷ್ಯಾಕಪ್ ಪಟ್ಟವನ್ನು ಮುಡಿಗೇರಿಸಿಕೊಂಡು.. ಏಷ್ಯಾ ಖಂಡದಲ್ಲೇ ಸರ್ವಶ್ರೇಷ್ಠ ತಂಡವಾಗಿ ಹೊರಹೊಮ್ಮಿದೆ.. ಚಾಂಪಿಯನ್ ಆಗುವುದರ ಜೊತೆಗೆ ಭಾರತ ತಂಡದ ಹಲವು ಆಟಗಾರರಿಗೆ ಪ್ರಶಸ್ತಿಗಳು ಹರಿದುಬಂದಿವೆ.. ನಾಯಕ ಸೂರ್ಯ ಕುಮಾರ್ ಯಾದವ್ ಕೂಡ ಸಾರ್ಥಕತೆ ಮೆರೆದು ಎಲ್ಲರ ಗಮನ ಸೆಳೆದಿದ್ದಾರೆ. ಏಷ್ಯಾಕಪ್ ಇಡೀ ಟೂರ್ನಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದ ಅಭಿಷೇಕ್ ಶರ್ಮಾಗೆ ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿ ಜೊತೆಗೆ 13.30 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ.. ಜೊತೆಗೆ 25 ಲಕ್ಷ ರೂ. ಮೌಲ್ಯದ ಹವಾಲ್ H9 SUV ಕಾರು ಕೂಡ ಬಹುಮಾನವಾಗಿ ಸಿಕ್ಕಿದೆ.. ಇನ್ನೂ ಟೂರ್ನಿಯ ಮೋಸ್ಟ್ ವಾಲ್ಯುಎಬೆಲ್ ಪ್ರೇಯರ್ ಪ್ರಶಸ್ತಿ ಸ್ಪಿನ್ ಮಾಂತ್ರಿಕ ಕುಲ್ದೀಪ್ ಯಾದವ್ಗೆ ದಕ್ಕಿದೆ.. ಇತ್ತ ಫೈನಲ್ನಲ್ಲಿ…
ಸಿಬ್ಬಂದಿ ಆಯ್ಕೆ ಆಯೋಗವು ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಭಾರತದಾದ್ಯಂತ ಒಟ್ಟು 7565 ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅಕ್ಟೋಬರ್ ಇಪ್ಪತ್ತೊಂದರ ಒಳಗೆ ಅರ್ಜಿಯನ್ನ ಸಲ್ಲಿಸಬಹುದು. 5069 ಪುರುಷ ಕಾನ್ಸ್ಟೇಬಲ್ ಹಾಗೂ 2496 ಮಹಿಳಾ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ. SSC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಅಂದ್ರೆ ಪಿಯುಸಿ ಪಾಸ್ ಆಗಿರ್ಬೇಕು. ಇನ್ನು ಅಭ್ಯರ್ಥಿಯ ವಯಸ್ಸು 18ರಿಂದ 25ರ ಒಳಗಿರಬೇಕು. ಒಬಿಸಿ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಇರಲಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 217000ರಿಂದ 69100 ರೂಪಾಯಿವರೆಗೆ ಮಾಸಿಕ ಸಂಬಳ ಇರಲಿದೆ. SC/ST/ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಆದರೆ ಇತರ ಅಭ್ಯರ್ಥಿಗಳು ಆನ್ಲೈನ್ ಮೂಲಕ 100ರೂ. ಪಾವತಿಸಬೇಕಾಗುತ್ತದೆ. SSC ಕಾನ್ಸ್ಟೇಬಲ್ ಹುದ್ದೆಗೆ…
ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ. 40 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಏಷ್ಯಾಕಪ್ ಫೈನಲ್ನಲ್ಲಿ ಇಂಡಿಯಾ ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಹೌದು.. ಸೆಪ್ಟೆಂಬರ್ 28ರಂದು ದುಬೈನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಎರಡೂ ತಂಡಗಳು ಸಜ್ಜಾಗುತ್ತಿವೆ.. ಈಗಾಗಲೇ 2025 ರ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಪಾಕಿಸ್ತಾನವನ್ನು 2 ಬಾರಿ ಬಗ್ಗು ಬಡಿದಿದೆ. ಈಗ, ಎರಡೂ ತಂಡಗಳು ಮತ್ತೊಮ್ಮೆ ಫೈನಲ್ನಲ್ಲಿ ಸೆಣಸಾಡಲು ರೆಡಿಯಾಗಿ ನಿಂತಿವೆ.. ಇನ್ನು, ಟೀಮ್ ಇಂಡಿಯಾ ಇದುವರೆಗೆ 8 ಬಾರಿ ಏಷ್ಯಾ ಕಪ್ ಗೆದ್ದಿದೆ. ಪಾಕಿಸ್ತಾನ 2 ಬಾರಿ ಪ್ರಶಸ್ತಿ ಗೆದ್ದಿದೆ. ಈವರೆಗೂ ನಡೆದ ಏಷ್ಯಾಕಪ್ ಟೂರ್ನಿಗಳಲ್ಲಿ ಎರಡೂ ದೇಶಗಳು ಫೈನಲ್ನಲ್ಲಿ ಮುಖಾಮುಖಿ ಆಗಿರಲಿಲ್ಲ. ಸೆಪ್ಟೆಂಬರ್ 28 ರಂದು ಭಾನುವಾರ ಫೈನಲ್ ಮ್ಯಾಚ್ ನಡೆಯಲಿದೆ. ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಫೈನಲ್ ತಲುಪಿದೆ. ಸಲ್ಮಾನ್ ಅಲಿ ಅಘಾ ನಾಯಕತ್ವದಲ್ಲಿ ಪಾಕಿಸ್ತಾನ ಫೈನಲ್ ತಲುಪಿದೆ. ಇದೇ ಟೂರ್ನಿಯಲ್ಲಿ ಎರಡು ಪಂದ್ಯಗಳಲ್ಲಿ ಪಾಕ್ಗೆ ಸೋಲಿನ ರುಚಿನ ನೀಡಿರುವ ಟೀಂ ಇಂಡಿಯಾ,…
ದೇಶದಲ್ಲಿ ಐ ಲವ್ ಮುಹಮ್ಮದ್ ಎಂಬ ಪೋಸ್ಟರ್ಗಳ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಸೆಪ್ಟೆಂಬರ್ 4ರಂದು ಕಾನ್ಪುರದ ರಾವತ್ಪುರದಲ್ಲಿ ನಡೆದ ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಐ ಲವ್ ಮುಹಮ್ಮದ್ ಎಂಬ ಪೋಸ್ಟರ್ಗಳನ್ನ ಹಿಡಿದು ಮೆರವಣಿಗೆ ಮಾಡಲಾಯಿತು. ಸೆಪ್ಟೆಂಬರ್ 4 ರಂದೆ ಪೊಲೀಸರು ‘ಐ ಲವ್ ಮುಹಮ್ಮದ್’ ಪೋಸ್ಟರ್ ಹೊಂದಿರುವ ಟೆಂಟ್ ಅನ್ನು ತೆಗೆದುಹಾಕಿದ್ದರು. ಮೆರವಣಿಗೆಯಲ್ಲಿ ಐ ಲವ್ ಮುಹಮ್ಮದ್ ಎಂಬ ಬ್ಯಾನರ್ ಪ್ರದರ್ಶಿಸಿದ್ದನ್ನ ಕೆಲ ಹಿಂದೂ ಸಂಘಟನೆಗಳು ಟೀಕಿಸಿದ್ವು. ಇದಾದ ನಂತರ ಲಖನೌ, ಬರೇಲಿ, ಕೌಶಂಬಿ, ಉನ್ನಾವೊ, ಕಾಶಿಪುರ ಮತ್ತು ಹೈದರಾಬಾದ್ ಸೇರಿದಂತೆ ಅನೇಕ ನಗರಗಳಲ್ಲಿ ಇದೇ ರೀತಿಯ ಪ್ರತಿಭಟನೆಗಳು ತೀವ್ರಗೊಂಡಿವೆ. ಇದರ ನಡುವೆ ಉತ್ತರ ಪ್ರದೇಶದ ಬರೇಲಿಯಲ್ಲಿ ಪರಿಸ್ಥಿತಿ ಕೈಮಿರಿದ್ದು ಕಲ್ಲು ತೂರಾಟ ನಡೆದಿದೆ. ಬರೇಲಿಯಲ್ಲಿ ಇಸ್ಲಾಮಿಕ್ ಧರ್ಮಗುರು ಮೌಲಾನಾ ತೌಕೀರ್ ರಜಾ ʼಐ ಲವ್ ಮುಹಮ್ಮದ್ʼ ಪೋಸ್ಟರ್ಗಳ ಬೆಂಬಲವಾಗಿ ಧರಣಿ ನಡೆಸುವುದಾಗಿ ಘೋಷಿಸಿದ್ದು ಇದಕ್ಕೆ ಜಿಲ್ಲಾಡಳಿತದಿಂದ ಅನುಮತಿ ದೊರೆಯದ ಕಾರಣ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು. ಮಸೀದಯಲ್ಲಿ ಪ್ರಾರ್ಥನೆಯ ನಂತರ…
ದಕ್ಷಿಣ ಭಾರತ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಕಲರ್ಸ್ ಕನ್ನಡ ಬಿಟ್ಟಿದ್ದ ಪ್ರೋಮೊದಲ್ಲಿ ಕಿಚ್ಚ ಸುದೀಪ್ ಹೇಳಿದಂತೆ 11 ಸೀಸನ್ ನೋಡಿದ್ದೇವೆ ಈ ಸೀಸನ್ನಲ್ಲಿ ಏನು ಸ್ಪೆಷಲ್ ಇದೆ ಅನ್ನೊರಿಗೆ ಓ ಭ್ರಮೆ ಅಂದಿದ್ದು, ಅದಕ್ಕೆ ತಕ್ಕಂತೆ ಬಿಗ್ ಬಾಸ್ ಈಗ ಹೊಸ ಪ್ರೋಮೊ ಬಿಟ್ಟಿದ್ದಾರೆ. ಬಿಗ್ ಬಾಸ್ 12ರ ಸ್ಪರ್ಧಿಗಳು ಯಾರು ಎನ್ನುವ ಪ್ರಶ್ನೆಗೆ ಬಿಗ್ ಬಾಸ್ ಹಿಂಟ್ ಕೊಟ್ಟಿದ್ದಾರೆ. ಇದರ ನಡುವೆ ಈಗ ಹೊಸ ವಿಷಯ ಹೊರಬಿದಿದ್ದು, ಬಿಗ್ಬಾಸ್ ಮನೆಗೆ ಕನ್ನಡದ ಖದರ್ ಖಳನಾಯಕ ಕಾಕ್ರೋಚ್ ಸುಧಿ ಎಂಟ್ರಿ ಪಕ್ಕಾ ಆಗಿದೆ. ಹೌದು… ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಇನ್ನು ಬಾಕಿ ಉಳಿದಿರೋದು ಕೆಲವೇ ಗಂಟೆಗಳು ಮಾತ್ರ. ಹೀಗಿರುವಾಗಲೇ ಶೋ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಯಾರೆಲ್ಲ ಸ್ಪರ್ಧಿಗಳು ಬಿಗ್ ಬಾಸ್ಗೆ ಬರುತ್ತಾರೆ ಎಂಬ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ. ಇದಕ್ಕೆ ಸಂಬಂಧಿಸಿದಂತೆ ಬಿಗ್ಬಾಸ್ ಹೊಸ ಪ್ರೋಮೊ ಬಿಟ್ಟಿದ್ದು,…
ಬುರುಡೆ ಗ್ಯಾಂಗ್, ಶ್ರೀ ಕ್ಷೇತ್ರದ ವಿರುದ್ಧದ ಷಡ್ಯಂತ್ರದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮೌನ ಮುರಿದಿದ್ದಾರೆ. ಸೌಜನ್ಯ ಕೇಸ್ನಿಂದ ತಲೆಬುರುಡೆ ಕೇಸ್ನವರೆಗೆ ಅನೇಕರು ಡಾ. ವೀರೇಂದ್ರ ಹೆಗ್ಗಡೆಯವರ ಕುಟುಂಬದ ಕಡೆಗೆ ಬೆರಳು ಮಾಡುತ್ತಿದ್ದರು. ದೇಹ ಹೂತಿಟ್ಟ ಕೇಸ್ನಲ್ಲಿ ಧರ್ಮಸ್ಥಳದ ಬಗ್ಗೆ ಅನೇಕರು ಅಪಪ್ರಚಾರ ಮಾಡಿದ್ದು, SIT ರಚನೆಯಿಂದಾಗಿ ಸತ್ಯ ಹೊರಬರುತ್ತಿದೆ. ಈ ಕುರಿತಾಗಿ ಮಾತನಾಡಿರುವ ಡಾ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆಯಿಂದ ಸತ್ಯಾಂಶ ಹೊರಬರುತ್ತಿದೆ ಅಂತಾ ಹೇಳಿದ್ದಾರೆ. ತಮ್ಮ ಮೇಲಿನ ದ್ವೇಷಕ್ಕೆ ಕಾರಣವೇನೆಂದು ಪ್ರಶ್ನಿಸಿರುವ ಅವರು, ನಿಷ್ಪಕ್ಷಪಾತ ತನಿಖೆ ನಡೆಸುತ್ತಿರುವ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದು, ಸತ್ಯದ ಹಾದಿಯಲ್ಲಿರುವುದರಿಂದ ತಮಗೆ ಆತ್ಮವಿಶ್ವಾಸವಿದೆ ಎಂದಿದ್ದಾರೆ. ಧರ್ಮಸ್ಥಳ ಬೇರೆ, ಧರ್ಮಸ್ಥಳದ ಊರಿನವರು ಬೇರೆ ಅಲ್ಲ. ಎಷ್ಟು ನಿಷ್ಠುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆ ಅಂತ ನೀವು ನೋಡಿದ್ದೀರಿ. ಯಾಕೆ ಇಷ್ಟು ದ್ವೇಷ ನನ್ನ ಮೇಲೆ ಇದೆ ಅಂತ ನನಗೆ ಗೊತ್ತಾಗಿಲ್ಲ. ಈಗ ಮನಸ್ಸು ಸ್ವಲ್ಪ ಹಗುರವಾಗಿದೆ. ನಮ್ಮ ಮೇಲೆ ದೃಢವಾದ…
ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಅದೆಷ್ಟೋ ಸಸ್ಯಗಳು ನಮ್ಮ ಆರೋಗ್ಯಕ್ಕೆ ಹೇಳಲಾಗದಷ್ಟು ಪ್ರಯೋಜನಗಳನ್ನು ನೀಡುತ್ತವೆ. ಅಂತಹ ವಿಸ್ಮಯಕಾರಿ ಸಸ್ಯಗಳಲ್ಲಿ ನಾಚಿಕೆ ಮುಳ್ಳು ಕೂಡ ಒಂದು. ಈ ಗಿಡಕ್ಕೆ ಹಲವಾರು ಹೆಸರುಗಳಿವೆ. ಮುಟ್ಟಿದರೆ ಮುನಿ, ನಾಚಿಕೆ ಮುಳ್ಳು, ಲಜ್ವಂತಿ, ಮಿಮೋಸಾ ಹಾಗೆ ಇಂಗ್ಲಿಷ್ನಲ್ಲಿ ಟಚ್ ಮಿ ನಾಟ್ ಪ್ಲ್ಯಾಂಟ್ ಅಂತಾರೆ. ಮುಳ್ಳುಗಳಿಂದ ಕೂಡಿರುವ ಈ ಸಸ್ಯ ಎಲ್ಲಾದ್ರೂ ಕಾಣ್ಸಿದ್ರೆ ಅದ್ರಿಂದ ಮಾರುದ್ದ ದೂರ ಹೋಗೋರೇ ಹೆಚ್ಚು. ಆದ್ರೆ, ಇದರಿಂದ ಸಿಗುವ ಅದ್ಭುತ ಆರೋಗ್ಯ ಲಾಭಗಳ ಬಗ್ಗೆ ಗೊತ್ತಾದ್ರೆ ನೀವಿದನ್ನ ಮನೆಗೆ ತಗೊಂಡ್ ಹೋಗೋದು ಗ್ಯಾರಂಟಿ. ಸೋ, ಇದ್ರ ಔಷಧೀಯ ಗುಣಗಳನ್ನ ಕ್ವಿಕ್ ಆಗಿ ನೋಡೋಣ. ಮಧುಮೇಹಿಗಳಿಗೆ ವರದಾನ ಮುಟ್ಟಿದರೆ ಮುನಿ ಮುಟ್ಟಿದರೆ ಮುನಿ ಎಲೆಗಳು ಮತ್ತು ಬೇರುಗಳು ಮಧುಮೇಹ ರೋಗಿಗಳಿಗೆ ವರದಾನವಾಗಿದೆ. ಇದರ ಎಲೆ ಹಾಗೂ ಬೇರನ್ನು ಒಣಗಿಸಿ ಪುಡಿ ಮಾಡಿ. ಪ್ರತಿದಿನ ಒಂದು ಗ್ಲಾಸ್ ನೀರಿಗೆ ಒಂದು ಚಮಚ ಈ ಪುಡಿಯನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರುತ್ತೆ. ಹಾಗೆ…
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಹಾಗೂ ವಿನಯ್ ರಾಜ್ಕುಮಾರ್ ಡೇಟ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಕೆಲ ದಿನಗಳಿಂದ ಹರಿದಾಡ್ತಾ ಇತ್ತು. ಈ ವಿಷ್ಯದ ಕುರಿತು ಇಬ್ಬರು ಡಿಫರೆಂಟ್ ಆಗಿ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಈ ಥರ ವಿಷ್ಯಗಳು ಮುನ್ನಲೆಗೆ ಬಂದಾಗ ಸೆಲೆಬ್ರಿಟಿಗಳು ಲೈವ್ ಬಂದು ಅಥವಾ ಪೋಸ್ಟ್ ಹಾಕುವ ಮೂಲಕ ಅಥವಾ ಮೀಡಿಯಾಗಳ ಮುಂದೆ ಹೇಳಿಕೆ ಕೊಡೋ ಮೂಲಕ ವಿಷಯದ ಕುರಿತಾಗಿ ಸ್ಪಷ್ಟನೆ ಕೊಡ್ತಾರೆ. ಆದ್ರೆ ನಟಿ ರಮ್ಯಾ ಸೋಷಿಯಲ್ ಮೀಡಿಯಾ ಟ್ರೆಂಡ್ಅನ್ನ ಫಾಲೋ ಮಾಡಿದ್ದಾರೆ. ಒಂದು ಕ್ಯೂಟ್ ಆದ ರೀಲ್ ಮೂಲಕ ವಿನಯ್ ರಾಜ್ಕುಮಾರ್ ಹಾಗೂ ಅವರ ನಡುವಿನ ಸಂಬಂಧ ಏನು ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ಮೇಲ್ನೋಟಕ್ಕೆ ಇದು ಜುವೆಲ್ರಿ ಶಾಪ್ ಪ್ರಮೋಷನ್ ಥರ ಅನ್ಸಿದ್ರೂ ವಿಡಿಯೋ ಕೊನೆಯಲ್ಲಿ ಅವರಿಬ್ಬರ ರಿಲೇಷನ್ಶಿಪ್ ಕುರಿತು ಸ್ಪಷ್ಟನೆ ನೀಡುವ ವೀಡಿಯೋ ಇದಾಗಿದೆ. ರಮ್ಯಾ ಹಾಗೂ ವಿನಯ್ ಇಬ್ರೂ ಜುವೆಲ್ಲರಿ ಶಾಪ್ಗೆ ಡೈಮಂಡ್ ರಿಂಗ್ ಖರೀದಿಸೋದಿಕ್ಕೆ ಹೋಗ್ತಾರೆ. ರಮ್ಯಾ ಕೈಗೆ ವಿನಯ್ ರಿಂಗ್ಅನ್ನ ಹಾಕ್ತಾರೆ. ಬಳಿಕ ಆ…
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಹಾವಳಿ ಮಿತಿ ಮೀರಿದೆ. ಇದರಿಂದ ಆಕ್ರೋಶಗೊಂಡ ಹೊಸಳ್ಳಿ ಗ್ರಾಮಸ್ಥರು, ಅಧಿಕಾರಿಗಳು ಮುಂದೆಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹೊಸಳ್ಳಿ ಗ್ರಾಮದಲ್ಲಿ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ನೇತೃತ್ವದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಯಿತು. ಗ್ರಾಮದಲ್ಲಿ 17 ಕಡೆ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಈ ಪೈಕಿ ಬಹುತೇಕ ಅಕ್ರಮ ಅಂತಾ ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ಲೋಕಾಯುಕ್ತ, ಇತರ ಇಲಾಖೆಗೆ ದೂರು ಸಲ್ಲಿಸಿದ್ದು, ಯಾವುದೇ ಕ್ರಮ ಆಗಿಲ್ಲ.. ಅಕ್ರಮ ಗಣಿಗಾರಿಕೆ ನಡೆಸುವವರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದು, ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಅಂತಾ ನೋವು ತೋಡಿಕೊಂಡರು. ಗ್ರಾಮೀಣ ರಸ್ತೆಯಲ್ಲಿ ಭಾರ ಮಿತಿ ಇಲ್ಲದೆ ಹತ್ತು ಚಕ್ರದ ಟಿಪ್ಪರ್ಗಳು ಓಡಾಡುತ್ತಿವೆ. ಸಂಜೆ ಹೊತ್ತಿನಲ್ಲಿ ಕ್ವಾರೆಗಳಲ್ಲಿ ಬ್ಲಾಸ್ಟಿಂಗ್ ನಡೆಯುತ್ತಿದ್ದು, ಪಕ್ಕದ ಮನೆಗಳು ಬಿರುಕು ಬಿಟ್ಟಿವೆ. ಕ್ರಷರ್ ವ್ಯಾಪಿಸಿದ್ದು, ವ್ಯವಸಾಯ ಮಾಡಲು ಆಗುತ್ತಿಲ್ಲ ಅಂತಾ ದೂರಿದರು. ಈ ಭಾಗದಲ್ಲಿ ಸಿ ಮತ್ತು…
ಅದ್ಧೂರಿ ಟ್ರೈಲರ್ ಮೂಲಕ ಧೂಳೆಬ್ಬಿಸಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನ ಡಬಲ್ ಆಗಿಸಿದೆ. ಅಕ್ಟೋಬರ್ 2ರಂದು ಕಾಂತಾರ ಚಾಪ್ಟರ್ 1 ವರ್ಲ್ಡ್ ವೈಡ್ ರಿಲೀಸ್ ಆಗಿ ಅಬ್ಬರಿಸಲಿದೆ. ಈ ನಡುವೆ ಟಿಕೆಟ್ ಬುಕಿಂಗ್ ಕೂಡ ಶುರುವಾಗಿದೆ. ಸೆಪ್ಟೆಂಬರ್ 26 ಮಧ್ಯಾಹ್ನ 12.29ರಿಂದ ಟಿಕೆಟ್ ಬುಕಿಂಗ್ ಶುರುವಾಗಲಿದೆ ಅಂತಾ ಚಿತ್ರತಂಡ ಮಾಹಿತಿ ನೀಡಿದೆ. ಬಹುದೊಡ್ಡ ಮಟ್ಟದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತೆರೆಕಾಣಲಿದ್ದು ಭಾರತದಾದ್ಯಂತ 7000ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗಲಿದೆ. ಕನ್ನಡ ಮಾತ್ರವಲ್ಲದೇ ಒಟ್ಟು 7 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ. ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ 200 ರೂಪಾಯಿ ಮೀರಬಾರದು ಎಂದು ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಅದರ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಮತ್ತು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದ್ದವು. ಆದ್ದರಿಂದ ಚಿತ್ರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೀಗಾಗಿ ‘ಕಾಂತಾರ: ಚಾಪ್ಟರ್ 1’ ಟಿಕೆಟ್ ಬೆಲೆ ದುಬಾರಿಯಾಗಿರೋದಂತೂ ಪಕ್ಕಾ.2022ರಲ್ಲಿ…