Subscribe to Updates
Get the latest creative news from FooBar about art, design and business.
Author: Mahanthesha
ಬೆಂಗಳೂರು, ಮೇ.04: ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ರಾಣಿ’ ಇದೀಗ ಅತ್ಯಂತ ಆಕರ್ಷಕ ಹಾಗೂ ಸ್ಫೂರ್ತಿದಾಯಕ ಘಟ್ಟಕ್ಕೆ ತಲುಪಿದೆ. ಇಷ್ಟು ದಿನ ಕೇವಲ ಕೌಟುಂಬಿಕ ಸಮಸ್ಯೆಗಳು ಹಾಗೂ ಸಂಬಂಧಗಳ ನಡುವೆ ಹೋರಾಡುತ್ತಿದ್ದ ರಾಣಿ, ಇದೀಗ ತನ್ನ ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿದ್ದಾಳೆ. ತನ್ನ ಬಾಲ್ಯದಲ್ಲಿ ಅರ್ಧಕ್ಕೆ ನಿಂತುಹೋದ ವಿದ್ಯಾಭ್ಯಾಸದ ಕನಸನ್ನು ನನಸು ಮಾಡಿಕೊಳ್ಳಲು ಅವಳು ಕೈಗೊಂಡಿರುವ ನಿರ್ಧಾರ ಇಡೀ ಕಥೆಯ ದಿಕ್ಕನ್ನೇ ಬದಲಿಸಿದೆ. ಜೈಲಲ್ಲಿ ಓದಲು ಅವಕಾಶ ಸಿಗದಿದ್ದಕ್ಕೆ ಓದನ್ನು ಅರ್ಧಕ್ಕೆ ಬಿಟ್ಟಿದ್ದ ರಾಣಿ, ಈಗ ಮತ್ತೆ ಶಾಲೆಯ ಮೆಟ್ಟಿಲು ಹತ್ತಲು ಸಿದ್ಧಳಾಗಿದ್ದಾಳೆ. ತನ್ನ ಓರಗೆಯ ಮಕ್ಕಳ ಜೊತೆ ಕೂತು ಪಾಠ ಕಲಿಯುತ್ತಿದ್ದಾಳೆ. ಸಮಾಜದ ಟೀಕೆಗಳು ಮತ್ತು ಒಳಗಿನ ಸಂಕೋಚವನ್ನು ಮೆಟ್ಟಿ ನಿಂತು, ಶಾಲಾ ಸಮವಸ್ತ್ರ ಧರಿಸಿ ಸಿದ್ಧವಾಗಿರುವ ರಾಣಿಯ ಈ ರೂಪ ಪ್ರೇಕ್ಷಕರಲ್ಲಿ ಅಚ್ಚರಿ ಹಾಗೂ ಅಭಿಮಾನ ಎರಡನ್ನೂ ಮೂಡಿಸಿದೆ. ರಾಣಿಯ ಈ ಹಠಕ್ಕೆ ಮನೆಯಲ್ಲಿ ಎಲ್ಲರ ಸಹಮತವಿಲ್ಲ. ಸಮಾಜ ಏನೆನ್ನುತ್ತದೋ ಎಂಬ ಭಯ ಹಾಗೂ…
ಬೆಂಗಳೂರು, ಏ.20: ಕನ್ನಡಿಗರ ಮನಗೆದ್ದಿರುವ ಸ್ಟಾರ್ ಸುವರ್ಣ ವಾಹಿನಿಯು ಅನೇಕ ವಿನೂತನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬರುತ್ತಿದೆ. ಸಾಮಾನ್ಯವಾಗಿ ಎರಡು ಧಾರಾವಾಹಿಗಳು ಒಂದಾಗುವುದನ್ನು ‘ಮಹಾಸಂಗಮ’ ಎಂದು ಹೇಳಲಾಗುತ್ತದೆ. ಆದರೆ ಕಿರುತೆರೆಯಲ್ಲಿ ಮೂರೂ ಧಾರಾವಾಹಿಗಳನ್ನು ಸೇರಿಸಿ “ತ್ರಿವೇಣಿ ಸಂಗಮ” ಮಾಡುತ್ತಿರುವುದು ಇದೇ ಮೊದಲು. ಈ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ. ‘ನೀ ಇರಲು ಜೊತೆಯಲ್ಲಿ’ ಧಾರಾವಾಹಿಯ ಕಥೆಯಲ್ಲಿ ಇದೀಗ 5 ವರ್ಷಗಳೇ ಕಳೆದಿದೆ, ಕಾಲಚಕ್ರ ಬದಲಾಗಿದೆ. ನಾಯಕ ಕೃಷ್ಣ ತನ್ನ ದುಡಿಮೆಯಿಂದ ಶ್ರೀಮಂತನಾಗಿದ್ದು, ರಚನಾಳ ನೆನಪಿನಲ್ಲಿ ಬದುಕುತ್ತಿದ್ದಾನೆ. ಕೃಷ್ಣನ ಈ ಪರಿಸ್ಥಿತಿ ನೋಡಿ ಮಗನಿಗೆ ಇನ್ನೊಂದು ಮದುವೆ ಮಾಡಬೇಕೆಂಬ ಹಂಬಲ ಹೆತ್ತವರದ್ದು. ಮತ್ತೊಂದೆಡೆ ಕಥೆಗೆ ಹೊಸ ನಾಯಕಿಯಾಗಿ ಎಂಟ್ರಿ ಕೊಟ್ಟಿರೋ ರಾಧಾ, ಮಧ್ಯಮ ಕುಟುಂಬದಲ್ಲಿ ಬೆಳೆದಿರೊಳು, ತನ್ನ ಜೀವನದಲ್ಲಿ ನಡೆದಿರುವ ಒಂದು ಘಟನೆಯಿಂದಾಗಿ ನೋಡಲು ಬರುವ ಹುಡುಗರು ಈಕೆಯನ್ನು ಮದುವೆಯಾಗಲು ನಿರಾಕರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಊರ್ಮಿಳಾ ರಚಿಸುವ ತಂತ್ರಗಾರಿಕೆಯಿಂದಾಗಿ ಕೃಷ್ಣ- ರಾಧಾರ ಮದುವೆ ನಿಶ್ಚಯವಾಗುತ್ತದೆ. ಇಷ್ಟವಿಲ್ಲದಿದ್ದರು ಹೆತ್ತವರಿಗಾಗಿ ಮದುವೆಯಾಗಲು ಸಿದ್ಧನಾಗುತ್ತಾನೆ…
ಬೆಂಗಳೂರು, ಏ.16 : ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ನಂತರ, ಜೀ ಕನ್ನಡ ವಾಹಿನಿಯು ಈಗ ಸಂಗೀತದ ಮಾಯಾಲೋಕವನ್ನು ಮರಳಿ ತರಲು ಸಜ್ಜಾಗಿದೆ. ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ಹೆಸರುವಾಸಿಯಾದ ಜನಪ್ರಿಯ ಗಾಯನ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪ್ಸ್’, ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. 3 ರಿಂದ 15 ವರ್ಷದೊಳಗಿನ ಪುಟಾಣಿ ಪ್ರತಿಭೆಗಳು ಭಾಗವಹಿಸುವ ಈ ಸೀಸನ್, ಕರ್ನಾಟಕದ ಮೂಲೆ ಮೂಲೆಯ ಕಿರಿಯ ಗಾಯಕರ ಅದ್ಭುತ ಪ್ರದರ್ಶನಗಳು ಮತ್ತು ಮರೆಯಲಾಗದ ಸಂಗೀತದ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ‘ಸರಿಗಮಪ ಲಿಟಲ್ ಚಾಂಪ್ಸ್’ ಏ.18ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ. ಈ ಸೀಸನ್ನಲ್ಲಿ ಅಪ್ರತಿಮ ಪ್ರತಿಭೆ ಹೊಂದಿರುವ ಪುಟ್ಟ ಗಾಯಕರು ತಮ್ಮ ಧ್ವನಿಯ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದ್ದಾರೆ. ಮನೋರಂಜನೆ ಮತ್ತು ಭಾವನೆಗಳ ಸಮ್ಮಿಶ್ರಣವಾಗಿರುವ ಈ ಕಾರ್ಯಕ್ರಮವು, ಉದಯೋನ್ಮುಖ ಗಾಯಕರಿಗೆ ಭವ್ಯ ವೇದಿಕೆಯನ್ನು ಕಲ್ಪಿಸಿಕೊಡುವುದರ ಜೊತೆಗೆ ಸಂಗೀತದ ಸಂಭ್ರಮವನ್ನು ಆಚರಿಸಲಿದೆ. ಈ ಬಾರಿಯೂ ಕನ್ನಡಿಗರ ನೆಚ್ಚಿನ ಗಾಯಕರಾದ ರಾಜೇಶ್…
ಬೆಂಗಳೂರು, ಏ.14: ರಾಜಧಾನಿಯ ಸಂಗೀತ ಪ್ರಿಯರಿಗಾಗಿ ‘ಪರಮ್ ಫೌಂಡೇಶನ್’ ವತಿಯಿಂದ ‘ತತ್ವ’ ಎಂಬ ವಿಶಿಷ್ಟ ಭಕ್ತಿ ಫ್ಯೂಷನ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ ಪ್ರಸಿದ್ಧ ಚೌಡಯ್ಯ ಸ್ಮಾರಕ ಭವನದಲ್ಲಿ ಏ.17 ರಂದು ಸಂಜೆ 6.15ಕ್ಕೆ ಈ ಸಂಗೀತ ಸಂಜೆ ಆಯೋಜಿಸಲಾಗಿದೆ. ‘ನಾದದ ಲಯದಿಂದ ಆನಂದದತ್ತ ಪಯಣ’ (A Journey from Breath to Bliss) ಎಂಬ ಪರಿಕಲ್ಪನೆಯಡಿ ಮೂಡಿಬರುತ್ತಿರುವ ಈ ಗಾಯನ ಸುಧೆಯನ್ನು ಅರುಂಧತಿ ವಸಿಷ್ಠ ಮತ್ತು ವರುಣ್ ಪ್ರದೀಪ್ ತಂಡವು ನಡೆಸಿಕೊಡಲಿದೆ. ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಸಮಕಾಲೀನ ಶೈಲಿಯಲ್ಲಿ ಪ್ರಸ್ತುತಪಡಿಸುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ. ವೇದಘೋಷಗಳು, ಶಾಸ್ತ್ರೀಯ ಪ್ರಭಾವ ಹಾಗೂ ಜನಪದ ಧಾಟಿಯನ್ನು ಆಧುನಿಕ ಸಂಗೀತ ಉಪಕರಣಗಳೊಂದಿಗೆ ಇಲ್ಲಿ ಬೆಸೆಯಲಾಗಿದೆ. ಉಮೇಶ್ ವಾರ್ಭುವನ್, ಪ್ರದ್ಯುಮ್ನ ಸೊರಬ ಸೇರಿದಂತೆ 15ಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು ಹಾಗೂ ವಾದ್ಯವೃಂದದ ಜೊತೆಗೆ 8 ಮಂದಿಯ ಗಾಯಕ ತಂಡವು ಈ ಸಂಜೆಯ ಕಾರ್ಯಕ್ರಮಕ್ಕೆ ಕಳೆ ಕಟ್ಟಲಿದೆ. ವಿಶೇಷವಾಗಿ ಖ್ಯಾತ ಕಲಾವಿದರಾದ ಪ್ರವೀಣ್ ಡಿ. ರಾವ್ ಹಾಗೂ…
ಬೆಂಗಳೂರು, ಏ.11: ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ, ಅಪರೂಪದ ಕಥಾಹಂದರ ಹೊಂದಿರುವ ಆರ್.ಸಿ.ಸ್ಟುಡಿಯೋಸ್ ನಿರ್ಮಾಣದ ಹಾಗೂ ಪ್ರಕಾಶ್ ರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ “ಫಾದರ್” ಚಿತ್ರದ ಮಾತಿನ ಜೋಡಣೆ ಮುಕ್ತಾಯವಾಗಿದೆ. ಇತ್ತೀಚೆಗೆ ಬಹುಭಾಷ ನಟ ಪ್ರಕಾಶ್ ರಾಜ್ ಅವರು ಶ್ರೀರಂಗಪಟ್ಟಣದಲ್ಲಿರುವ ತಮ್ಮ ಸ್ಟುಡಿಯೋದಲ್ಲೇ “ಫಾದರ್” ಚಿತ್ರದ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅಭಿನಯದ “ಲವ್ ಮಾಕ್ಟೇಲ್ 3” ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಡಾರ್ಲಿಂಗ್ ಕೃಷ್ಣ ಅಭಿನಯದ “ಫಾದರ್” ಚಿತ್ರದ ಪ್ರಚಾರ ಕಾರ್ಯಕ್ಕೂ ಈಗ ಚಾಲನೆ ದೊರಕಿದೆ. ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ಹಾಗೂ ಸುದೀಪ್ ಅವರು ಅನಾವರಣಗೊಳಿಸಿದ ಟೀಸರ್ ಎಲ್ಲರ ಮನ ಗೆದ್ದಿದೆ. ಆರ್.ಸಿ. ಸ್ಟುಡಿಯೋಸ್ ಮೂಲಕ ಹೊರಬರುತ್ತಿರುವ ಈ “ಫಾದರ್” ಚಿತ್ರವು ನೋಡುಗರನ್ನು ಭಾವುಕ ಪಯಣಕ್ಕೆ ಕರೆದೊಯ್ಯುವ ಹೃದಯ ಸ್ಪರ್ಶಿ ಚಿತ್ರವಾಗಲಿದೆ. “ಫಾದರ್” ಅಂದರೆ ಒಂದು ಶಕ್ತಿ.…
ಬೆಂಗಳೂರು, ಏ.09: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ‘ಮಸ್ತ್ ಮಲೈಕಾ’ ಹಾಡು ಈಗ ದಾಖಲೆ ಬರೆದಿದೆ. ಬಿಡುಗಡೆಯಾದ ಬಳಿಕ ಈ ಪಾರ್ಟಿ ಸಾಂಗ್ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ಬಾಯಲ್ಲಿ ನೋಡಿದ್ರೂ ಮಲೈಕಾಳದ್ದೇ ಮಸ್ತ್ ಮಸ್ತ್ ಗುನುಗು. ಅಷ್ಟರಮಟ್ಟಿಗೆ ‘ಮಸ್ತ್ ಮಲೈಕಾ’ ಹಾಡು ಭರ್ಜರಿ ಹಿಟ್ ಆಗಿತ್ತು. ಇದೀಗ ಯೂಟ್ಯೂಬ್ನಲ್ಲಿ ‘ಮಸ್ತ್ ಮಲೈಕಾ’ ಹಾಡು ದಾಖಲೆ ಬರೆದಿದೆ. ಸರೆಗಮ ಕನ್ನಡ ಯೂಟ್ಯೂಬ್ನಲ್ಲಿ ಮಸ್ತ್ ಮಲೈಕಾ ಗೀತೆ ಐದು ಮಿಲಿಯನ್ ಗಟ್ಟಲೇ ವ್ಯೂಸ್ ಕಂಡಿದೆ. ಈ ಮೂಲಕ ಕಿಚ್ಚನ ಮಾರ್ಕ್ ಚಿತ್ರದ ಹಾಡು ರೆಕಾರ್ಡ್ ಕ್ರಿಯೇಟ್ ಮಾಡಿದೆ. ಅಂದಹಾಗೇ ಮಸ್ತ್ ಮಲೈಕಾ ಹಾಡಿಗೆ ಕಂಠ ಕುಣಿಸಿದವರು ಸಾನ್ವಿ ಸುದೀಪ್. ಅವರ ಜೊತೆ ನಕಾಶ್ ಅಜೀಜ್ ಹಾಡಿದ್ದಾರೆ. ಮಗಳ ಧ್ವನಿಗೆ ಕಿಚ್ಚ ಮಸ್ತ್ ಹೆಜ್ಜೆ ಹಾಕಿದ್ದರು. ಈ ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಅನೂಪ್ ಭಂಡಾರಿ ಅವರು ಈ…
ಬೆಂಗಳೂರು, ಏ.08 : ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಅಂತಿಮ ಘಟ್ಟ ತಲುಪಿದ್ದು ಗ್ರ್ಯಾಂಡ್ ಫಿನಾಲೆ ಇದೆ ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30 ರವರೆಗೆ ಪ್ರಸಾರ ಆಗಲಿದೆ. ಸೆಲೆಬ್ರಿಟಿ ಸ್ಪರ್ಧಿಗಳು ಮತ್ತು ಡ್ಯಾನ್ಸರ್ ಗಳು ಜೋಡಿಯಾಗಿ ಪರ್ಫಾರ್ಮೆನ್ಸ್ ನೀಡಿದ ಈ ಶೋನಲ್ಲಿ ವಿವಿಧ ಬಗೆಯ ನೃತ್ಯ ಪ್ರಕಾರಗಳು ಮತ್ತು ಥೀಮ್ ಗಳಿದ್ದಿದ್ದು ಮಾತ್ರವಲ್ಲದೆ ಈ ಕಾರ್ಯಕ್ರಮ ಕಳೆದ ಕೆಲವು ವಾರಗಳಿಂದ ಚಾನೆಲ್ನ ವೀಕೆಂಡ್ ಕಾರ್ಯಕ್ರಮಗಳಲ್ಲಿ ಪ್ರಮುಖ ಭಾಗವಾಗಿತ್ತು. ಡಾ. ಶಿವರಾಜ್ ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ಅವ್ರು ಡಾನ್ಸ್ ಕರ್ನಾಟಕ ಡಾನ್ಸ್ ಶೋನ ತೀರ್ಪುಗಾರಾಗಿದ್ದರು. ಇನ್ನು ಈ ಶೋನ ನಿರೂಪಣೆಯನ್ನು ಅನುಶ್ರೀ ಮಾಡುತ್ತಿದ್ದಾರೆ. ಈ ಸೀಸನ್ನಲ್ಲಿ ತೀರ್ಪುಗಾರರು ಸ್ಪರ್ಧಿಗಳ ಪರ್ಫಾಮನ್ಸ್ ಹಾವ-ಭಾವ, ಕೋ ಆರ್ಡಿನೇಷನ್, ಓವರ್ ಆಲ್ ಪ್ರೆಸೆಂಟೇಷನ್ಗಳನ್ನು ನೋಡಿ ತಮ್ಮ ತೀರ್ಪನ್ನು ನೀಡಿರುವುದು ಸ್ಪರ್ಧಿಗಳ…
ಬೆಂಗಳೂರು, ಏ.06: ನಿಮ್ಮ ಮಗುವಿನಲ್ಲಿರುವ ಸೃಜನಶೀಲತೆಗೆ ಸಿನೆಮಾ ಲೋಕದ ದಿಗ್ಗಜರ ಮಾರ್ಗದರ್ಶನ ಸಿಕ್ಕರೆ ಹೇಗಿರುತ್ತದೆ? ಅಂತಹ ಒಂದು ಅದ್ಭುತ ಅವಕಾಶವನ್ನು ʻಪರಮ್ ಫೌಂಡೇಶನ್’ ಇದೀಗ ಹದಿಹರೆಯದವರಿಗಾಗಿ (11-16 ವರ್ಷದೊಳಗಿನ) ತಂದಿದೆ. ಕೇವಲ ತಾಂತ್ರಿಕ ಕಲಿಕೆಯಲ್ಲದೆ, ಹಳೆಯ ನೀತಿ ಕಥೆಗಳಿಗೆ ಆಧುನಿಕ ಸಮಾಜದ ಸವಾಲುಗಳನ್ನು ಬೆರೆಸಿ ಕಿರುಚಿತ್ರ ತಯಾರಿಸುವ ವಿನೂತನ ‘ಸ್ಟಾಪ್ ಮೋಷನ್ ಅನಿಮೇಷನ್’ ಶಿಬಿರ ಏಪ್ರಿಲ್ 20ರಿಂದ ಆರಂಭವಾಗಲಿದೆ. ಈ ಶಿಬಿರದ ಅತ್ಯಂತ ದೊಡ್ಡ ಆಕರ್ಷಣೆಯೆಂದರೆ ಚಿತ್ರರಂಗ ಹಾಗೂ ಕಲಾ ಲೋಕದ ಖ್ಯಾತನಾಮರಾದ ರಘು ದೀಕ್ಷಿತ್ (ಸಂಗೀತ), ಎಂ.ಡಿ. ಪಲ್ಲವಿ ಮತ್ತು ಶ್ವೇತಾ (ಧ್ವನಿ ಸಂಯೋಜನೆ), ಕಾರ್ತಿಕ್ ಸರಗೂರು (ದೃಶ್ಯಕಾವ್ಯ) ಹಾಗೂ ಸಿದ್ಧಾರ್ಥ್ ಭರತ್ (ವಿಜ್ಞಾನ) ಅವರು ವಿದ್ಯಾರ್ಥಿಗಳ ಜೊತೆ ನೇರವಾಗಿ ಸಂವಾದ ನಡೆಸಿ ಮಾರ್ಗದರ್ಶನ ನೀಡುವುದು. ಯಾವ್ಯಾವ ಸೆಲೆಬ್ರಿಟಿಯಿಂದ ಏನು ಕಲಿಕೆ?:ರಘು ದೀಕ್ಷಿತ್ : ತಮ್ಮ ವಿಶಿಷ್ಟ ಸಂಗೀತದ ಮೂಲಕ ಸಿನೆಮಾದಲ್ಲಿ ಭಾವನೆಗಳನ್ನು (Sound & Mood) ತುಂಬುವ ಕಲೆ ಕಲಿಸಲಿದ್ದಾರೆ.ಎಂ.ಡಿ. ಪಲ್ಲವಿ ಮತ್ತು ಶ್ವೇತಾ: ಕಥೆಯ ಪಾತ್ರಗಳಿಗೆ ಪ್ರಾಣ…
ಬೆಂಗಳೂರು, ಏ.01: ಮಲಯಾಳಂ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಶ್ರೀ ಗೋಕುಲಂ ಮೂವೀಸ್’ ಬ್ಯಾನರ್ ನಡಿ ಗೋಕುಲಂ ಗೋಪಾಲನ್ ಅವರು ನಿರ್ಮಿಸಿರುವ ಬಹುನಿರೀಕ್ಷಿತ ಕಥನಾರ್ ಟ್ರೇಲರ್ ಬಿಡುಗಡೆಯಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಹೀಗಾಗಿ ಕನ್ನಡದಲ್ಲಿಯೂ ಟ್ರೇಲರ್ ಅನಾವರಣಗೊಂಡಿದೆ. ಮಲಯಾಳಂ ನಟ ಜಯಸೂರ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸುದ್ದು, ಅನುಷ್ಕಾ ಶೆಟ್ಟಿ, ಪ್ರಭುದೇವ ಸನೂಪ್ ಸಾನ್, ಸ್ಯಾಂಡಿ, ದೇವಿಕಾ, ನಿತೀಶ್ ಭಾರದ್ವಾಜ್, ವಿನೀತ್, ಹರೀಶ್ ಉತ್ತಮನ್, ಶ್ರೀಕಾಂತ್ ಮುರಳಿ ಮತ್ತು ಕುಲ್ಪ್ರೀತ್ ಯಾದವ್ ತಾರಾಬಳಗದಲ್ಲಿದ್ದಾರೆ. ಹಾಲಿವುಡ್ ನೆನಪಿಸುವ ವಿ.ಎಫ್.ಎಕ್ಸ್ ಮತ್ತು ಹಿನ್ನೆಲೆ ಸಂಗೀತ, ವಿಷ್ಯುವಲ್ ಎಫೆಕ್ಟ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿವೆ. ಜಯಸೂರ್ಯ ತಮ್ಮ ವೃತ್ತಿಜೀವನದ ಸುಮಾರು ನಾಲ್ಕು ವರ್ಷಗಳನ್ನು ಈ ಚಿತ್ರಕ್ಕೆ ಮೀಸಲಿಟ್ಟಿದ್ದಾರೆ. ಕಥನಾರ್ ಚಿತ್ರ 15 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾಗೆ ರೋಜಿನ್ ಥಾಮಸ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಚಿತ್ರಕ್ಕೆ ಆರ್. ರಾಮಾನಂದ್ ಮತ್ತು ರೋಜಿನ್ ಥಾಮಸ್ ಚಿತ್ರಕಥೆ ಬರೆದಿದ್ದು, ನೀಲ್ ಡಿ ಕುನ್ಹಾ ಕ್ಯಾಮರಾ ವರ್ಕ್ ಇದೆ.…
ಬೆಂಗಳೂರು, ಮಾ.27: ಬೆಂಗಳೂರಿನ ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯದ ಸಮಸ್ಯೆಗೆ ಮುಕ್ತಿ ನೀಡಲು ಬಿಎಂಆರ್ಸಿಎಲ್ ತನ್ನ ಜಾಲ ವಿಸ್ತರಣೆಗೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಗರದ ಬಹುನಿರೀಕ್ಷಿತ ಪಿಂಕ್ ಲೈನ್ ಮತ್ತು ಬ್ಲೂ ಲೈನ್ ಮೆಟ್ರೋ ಮಾರ್ಗಗಳಿಗಾಗಿ ಅತ್ಯಾಧುನಿಕ ಚಾಲಕರಹಿತ ರೈಲುಗಳು ಶೀಘ್ರದಲ್ಲೇ ಆಗಮಿಸಲಿವೆ. ಬೆಂಗಳೂರಿನ ಬಿಇಎಂಎಲ್ ಕಾರ್ಖಾನೆಯಿಂದ ಈ ತಿಂಗಳು ಮತ್ತು ಮುಂದಿನ ತಿಂಗಳಲ್ಲಿ ಒಟ್ಟು ನಾಲ್ಕು ಹೊಸ ರೈಲು ಸೆಟ್ಗಳು ಬಿಎಂಆರ್ಸಿಎಲ್ ಕೈಸೇರಲಿವೆ. ಮೇ ತಿಂಗಳಲ್ಲಿ ಪಿಂಕ್ ಲೈನ್ ಭಾಗಶಃ ಆರಂಭ ಸಾಧ್ಯತೆ:ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಪಿಂಕ್ ಲೈನ್ ಮಾರ್ಗದ ಕಾಮಗಾರಿ ಅಂತಿಮ ಹಂತದಲ್ಲಿದೆ. ವಿಶೇಷವಾಗಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ ಒಟ್ಟು ಆರು ಮೆಟ್ರೋ ನಿಲ್ದಾಣಗಳನ್ನು ಮೇ ತಿಂಗಳಿನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್ಸಿಎಲ್ ಯೋಜನೆ ರೂಪಿಸಿದೆ. ಈ ಮಾರ್ಗಕ್ಕಾಗಿ ಈಗಾಗಲೇ 5 ರೈಲುಗಳು ಬಂದಿದ್ದು, ಏಪ್ರಿಲ್ ವೇಳೆಗೆ ಮತ್ತೊಂದು ರೈಲು ಆಗಮಿಸಲಿದೆ. ಇದರಿಂದ ದಕ್ಷಿಣ ಬೆಂಗಳೂರಿನ ಜನರಿಗೆ ಟ್ರಾಫಿಕ್ ಕಿರಿಕಿರಿಯಿಂದ ದೊಡ್ಡ ಮಟ್ಟದ ಸಮಾಧಾನ ಸಿಗಲಿದೆ. ಏರ್ ಪೋರ್ಟ್…