ಬೆಂಗಳೂರು, ಫೆ.23: ಸಂಸ್ಕೃತಿ, ಸೃಜನಶೀಲತೆ ಮತ್ತು ವ್ಯಾಪ್ತಿಯನ್ನು ಆಧರಿಸಿದ ಭವಿಷ್ಯದ ವಿಷಯ (Content) ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಮುಂದುವರಿಸುತ್ತಾ, ‘ಜೀ’ (Z) ಸಂಸ್ಥೆಯು ‘ಜೀ ಕಿರುಚಿತ್ರ ಸ್ಪರ್ಧೆ’ಯನ್ನು (Zee Short Film Contest) ಆಯೋಜಿಸುತ್ತಿದೆ. ದೇಶದಾದ್ಯಂತ ಉದಯೋನ್ಮುಖ ಚಿತ್ರ ನಿರ್ಮಾಣ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ ಮತ್ತು ಅವರನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ.
ಭಾರತದ ವಿವಿಧ ಪ್ರಾದೇಶಿಕ ಸಿನೆಮಾ ಧ್ವನಿಗಳನ್ನು ಒಂದೇ ರಾಷ್ಟ್ರೀಯ ವೇದಿಕೆಯಲ್ಲಿ ಒಟ್ಟುಗೂಡಿಸುವ ಈ ಸ್ಪರ್ಧೆ, ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಬಹುಭಾಷಾ ಪ್ರತಿಭಾ ಅನ್ವೇಷಣೆಯ ಅತ್ಯಂತ ಮಹತ್ವಾಕಾಂಕ್ಷಿ ಪ್ರಯತ್ನಗಳಲ್ಲಿ ಒಂದಾಗಿದೆ. ಹಿಂದಿ, ಮರಾಠಿ, ಬೆಂಗಾಲಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಏಳು ಪ್ರಮುಖ ಭಾಷೆಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಸಿನಿಮಾ ಪರಂಪರೆ ಹೊಂದಿರುವ ಕಥೆಗಾರರಿಗೆ ರಾಷ್ಟ್ರೀಯ ಮಟ್ಟದ ಅವಕಾಶ ಸಿಗಲಿದೆ.
ಈ ಸ್ಪರ್ಧೆಯ ಪ್ರಮುಖ ಆಕರ್ಷಣೆ ಎಂದರೆ ವಿವಿಧ ಪ್ರಾದೇಶಿಕ ಚಲನಚಿತ್ರ ಕ್ಷೇತ್ರಗಳಲ್ಲಿ ಹೊಸ ದಾರಿಯನ್ನು ತೋರಿಸಿದ ಗಣ್ಯ ನಿರ್ದೇಶಕ ತೀರ್ಪುಗಾರರು ಇರಲಿದ್ದಾರೆ. ‘ಗ್ಯಾಂಗ್ಸ್ ಆಫ್ ವಾಸೇಪುರ್’ ಚಿತ್ರ ಮೂಲಕ ಆಧುನಿಕ ಹಿಂದಿ ಸಿನಿಮಾವನ್ನು ರೂಪಿಸಿದ ಅನುರಾಗ್ ಕಶ್ಯಪ್, ‘ನಟರಂಗ್’ ಚಿತ್ರದಿಂದ ಹೆಸರುವಾಸಿಯಾದ ಮರಾಠಿಯ ರವಿ ಜಾಧವ್, ‘ಆಟೋಗ್ರಾಫ್’ ಮತ್ತು ‘ಜಾತಿಶ್ವರ್’ ಚಿತ್ರದ ಮೂಲಕ ಪ್ರಶಂಸಿಸಲ್ಪಟ್ಟ ಬೆಂಗಾಲಿಯ ಸೃಜಿತ್ ಮುಖರ್ಜಿ, ‘ಕಲ್ಕಿ 2898 AD’ ನಂತಹ ಜಾಗತಿಕ ಮಟ್ಟದ ಅದ್ಭುತ ಚಿತ್ರ ನೀಡಿದ ತೆಲುಗಿನ ನಾಗ್ ಅಶ್ವಿನ್, ಸಾಮಾಜಿಕವಾಗಿ ಬೇರೂರಿರುವ ಪ್ರಭಾವಶಾಲಿ ನಾಟಕಗಳಿಗೆ ಹೆಸರಾದ ತಮಿಳಿನ ಸಮುತಿರಕಾನಿ, ‘ಜಲ್ಲಿಕಟ್ಟು’ ಚಿತ್ರಗಳ ಮೂಲಕ ಅಂತರಾಷ್ಟ್ರೀಯ ಮನ್ನಣೆ ಪಡೆದ ಮಲಯಾಳಂನ ಲಿಜೋ ಜೋಸ್ ಪೆಲ್ಲಿಸ್ಸೇರಿ ಮತ್ತು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಮತ್ತು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳ ಮೂಲಕ ಭಾವನಾತ್ಮಕ ಕಥೆಗೆ ಹೆಸರುವಾಸಿಯಾದ ಕನ್ನಡದ ಹೆಮಂತ್ ರಾವ್ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.
ಮೊದಲ ಬಾರಿಗೆ, ಇಂತಹ ದಿಗ್ಗಜ ನಿರ್ದೇಶಕರು ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಒಂದೇ ವೇದಿಕೆಯಡಿ ಒಂದಾಗಿದ್ದಾರೆ. ಈ ಸ್ಪರ್ಧೆಯು ಭವಿಷ್ಯದ ಪ್ರತಿಭೆಗಳನ್ನು ಬೆಳೆಸುವ ‘ಜೀ’ ನ ಉದ್ದೇಶವನ್ನು ಸೂಚಿಸುತ್ತದೆ.
ಈ ಸ್ಪರ್ಧೆಯ ಮೂಲಕ ಯುವ ಮತ್ತು ಉತ್ಸಾಹಿ ಚಲನಚಿತ್ರ ನಿರ್ಮಾಪಕರಿಗೆ ತಮ್ಮ ಕರಕುಶಲತೆಯನ್ನು ಪ್ರದರ್ಶಿಸಲು ಅವಕಾಶ ಸಿಗಲಿದೆ. ಭಾಗವಹಿಸುವವರು ವೃತ್ತಿಪರ ಚಲನಚಿತ್ರ ಸಮುದಾಯದಲ್ಲಿ ಮಾನ್ಯತೆ, ನಗದು ಬಹುಮಾನಗಳು ಮತ್ತು ‘ಜೀ’ನಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಪಡೆಯಲಿದ್ದಾರೆ.
ಈ ಬಗ್ಗೆ ಮಾತನಾಡಿದ ಜೀ(ZEE) ಮತ್ತು ಜೀ5(ZEE5) ನ ಚೀಫ್ ಮಾರ್ಕೆಟಿಂಗ್ ಆಫೀಸರ್, ಕಾರ್ತಿಕ್ ಮಹದೇವ್ ‘ಭಾರತವು ವಿಶ್ವದ ಅತ್ಯಂತ ವೈವಿಧ್ಯಮಯ ಕಥೆ ಹೇಳುವ ಸಂಸ್ಕೃತಿಗಳಿಗೆ ನೆಲೆಯಾಗಿದೆ. ಜೀ ಕಿರುಚಿತ್ರ ಸ್ಪರ್ಧೆಯ ಮೂಲಕ ನಾವು ಈ ಪ್ರತಿಭೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳನ್ನು ಒದಗಿಸುತ್ತಿದ್ದೇವೆ. ಇದು ಕೇವಲ ಸ್ಪರ್ಧೆಯಲ್ಲ, ಬದಲಿಗೆ ಭಾರತೀಯ ಸಿನಿಮಾದ ಭವಿಷ್ಯವನ್ನು ರೂಪಿಸುವ ಮುಂದಿನ ತಲೆಮಾರಿನ ಕಥೆಗಾರರನ್ನು ಬೆಳೆಸುವ ಒಂದು ಕಾರ್ಯತಂತ್ರದ ಹೆಜ್ಜೆಯಾಗಿದೆ’ ಎಂದರು.
ಈ ಸ್ಪರ್ಧೆಯ ಬಗ್ಗೆ ಮಾತನಾಡಿದ ಅನುರಾಗ್ ಕಶ್ಯಪ್ ‘ಒಂದು ಕಿರುಚಿತ್ರವು ನನಗೆ ನನ್ನ ಮೊದಲ ದೊಡ್ಡ ಸಿನಿಮಾದ ಅವಕಾಶವನ್ನು ತಂದುಕೊಟ್ಟಿತು. ಚಲನಚಿತ್ರ ನಿರ್ಮಾಪಕರಾಗುವ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಲು ಇದು ಒಂದು ಸುವರ್ಣ ಅವಕಾಶ ಎಂದರು. ಸೃಜಿತ್ ಮುಖರ್ಜಿ ಮಾತನಾಡಿ, “ಚಲನಚಿತ್ರ ನಿರ್ಮಾಣವು ಯಾವಾಗಲೂ ಹೃದಯಕ್ಕೆ ಸಂಬಂಧಿಸಿದ ವಿಷಯ. ನಿಮ್ಮ ಗುರಿಯನ್ನು ಅನುಸರಿಸಿ, ಅದು ಅಡೆತಡೆಗಳ ನಡುವೆಯೂ ನಿಮಗೆ ದಾರಿಯನ್ನು ತೋರಿಸುತ್ತದೆ” ಎಂದರು. ಲಿಜೋ ಜೋಸ್ ಪೆಲ್ಲಿಸೇರಿ ಮಾತನಾಡಿ ‘ನೀವು ಒಬ್ಬ ಚಲನಚಿತ್ರ ನಿರ್ಮಾಪಕ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ ಬನ್ನಿ, ದೊಡ್ಡ ಮಟ್ಟಕ್ಕೆ ಬೆಳೆಯಲು ಒಂದು ಕಿರುಚಿತ್ರ ಮಾಡಿ ಎಂದರು. ನಾಗ್ ಅಶ್ವಿನ್ ಮಾತನಾಡಿ, ‘ಚಲನಚಿತ್ರೋದ್ಯಮವು ಕೇವಲ ಕನಸುಗಳ ಲೋಕವಲ್ಲ ಅದು ಕಥೆಗಳ ಲೋಕ. ನಿಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಿ’ ಎಂದರು.
ಹೇಮಂತ್ ರಾವ್ ಮಾತನಾಡಿ ‘ಸಿನಿಮಾಪ್ರೇಮ ಎಂದರೆ ಎಂದಿಗೂ ಗುಣವಾಗದ ಕಾಯಿಲೆ. ನಿಮ್ಮೊಳಗೆ ಕಾಡುತ್ತಿರುವ ಕಥೆ ಇದೆಯೇ? ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಝೀ ಕಿರುಚಿತ್ರ ಸ್ಪರ್ಧೆಗೆ ನೋಂದಾಯಿಸಿ ಮತ್ತು ನಿಮ್ಮ ಕಿರುಚಿತ್ರವನ್ನು ಸಲ್ಲಿಸಿ’ ಎಂದರು. ರವಿ ಜಾಧವ್ ಮಾತನಾಡಿ ‘ ಸಿನಿಮಾಗೆ ಪ್ರತಿಭೆ, ಉತ್ಸಾಹ ಮತ್ತು ದೃಷ್ಟಿ ಮುಖ್ಯ ಅವು ನಿಮ್ಮಲ್ಲಿದ್ದರೆ ಈ ಸ್ಪರ್ಧೆ ನಿಮಗೆ ಸರಿಯಾದ ಆಯ್ಕೆ” ಎಂದರು. ಸಮುತಿರಕಾನಿ ಮಾತನಾಡಿ ‘ನಿಮ್ಮ ಕಿರುಚಿತ್ರವನ್ನು ಕಳುಹಿಸಿ ಮತ್ತು ದೇಶದ ಪ್ರಸಿದ್ಧ ನಿರ್ದೇಶಕರ ಮುಂದೆ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇರುವ ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಿ’ ಎಂದರು.
‘ಜೀ’ ಸಂಸ್ಥೆಯು ವಿಶ್ವಾಸಾರ್ಹತೆ ಮತ್ತು ಹೊಸತನದ ಮೂಲಕ ಸಾಂಸ್ಕೃತಿಕವಾಗಿ ಪ್ರಭಾವಶಾಲಿ ಕಥೆ ಹೇಳುವಿಕೆಯನ್ನು ಬೆಂಬಲಿಸುವುದನ್ನು ಮುಂದುವರಿಸುತ್ತಿದೆ. ಜೊತೆಗೆ ಜೀ ಶಾರ್ಟ್ ಫಿಲ್ಮ್ ಸ್ಪರ್ಧೆಯ ಮೂಲಕ ಭಾರತೀಯ ಮನರಂಜನೆಯ ಭವಿಷ್ಯವನ್ನು ರೂಪಿಸುವ ಹೊಸ ಧ್ವನಿಗಳಿಗೆ ದಾರಿ ತೆರೆದಿದೆ. ಇದು ಕೇವಲ ಹೊಸ ಧ್ವನಿಗಳನ್ನು ಅನ್ವೇಷಿಸುವುದು ಮಾತ್ರವಲ್ಲದೆ, ಮುಂದಿನ ಪೀಳಿಗೆಯ ಚಿತ್ರ ನಿರ್ಮಾಪಕರಿಗೆ ಬಲವಾದ ವೇದಿಕೆ ನಿರ್ಮಿಸುವ ಮಹತ್ವದ ಹೆಜ್ಜೆಯಾಗಿದೆ.
