ನೆರೆಯ ದೇಶವಾದ ನೇಪಾಳದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈಗಾಗಲೇ ಅಲ್ಲಿನ ಸರ್ಕಾರ ಪತನವಾಗಿ ಪ್ರಧಾನಿ ಬೇರೆಡೆ ಪಲಾಯನ ಮಾಡಿದ್ದಾರೆ. ನೇಪಾಳದಲ್ಲಿ ಹಿಂಸಾಚಾರ ಹೆಚ್ಚುತ್ತಿದ್ದಂತೆ ಉತ್ತರ ಪ್ರದೇಶದ ಭಾರತ-ನೇಪಾಳ ಗಡಿಯುದ್ದಕ್ಕೂ 600 ಕಿ.ಮೀ. ಉದ್ದದಲ್ಲಿ ಉದ್ವಿಗ್ನತೆ ಆವರಿಸಿದೆ. ಬಹ್ರೈಚ್ನಿಂದ ಲಖಿಂಪುರ ಖೇರಿಯವರೆಗೆ, ಸಶಸ್ತ್ರ ಸೀಮಾ ಬಲ್ ಮತ್ತು ರಾಜ್ಯ ಪೊಲೀಸರು ಕ್ರಾಸಿಂಗ್ಗಳನ್ನು ಮುಚ್ಚಿದ್ದಾರೆ. ನಾಗರಿಕರ ಚಲನವಲನಗಳನ್ನು ನಿರ್ಬಂಧಿಸಿದ್ದಾರೆ.
ನೇಪಾಳದ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ನಿವಾಸವನ್ನು ಸುಟ್ಟುಹಾಕಲಾಯಿತು, ರಾಜಕೀಯ ಕಚೇರಿಗಳನ್ನು ಧ್ವಂಸಗೊಳಿಸಲಾಯಿತು. ಇದರಿಂದ ಭಾರತದ ಗಡಿಗಳನ್ನು ಮುಚ್ಚಲಾಗಿದೆ, ಕಠ್ಮಂಡುವಿಗೆ ಹೋಗುವ ವಿಮಾನಗಳನ್ನು ಸಹ ಉತ್ತರ ಪ್ರದೇಶದ ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ಇದರಿಂದಾಗಿ ಉತ್ತರ ಪ್ರದೇಶದ 7 ಗಡಿ ಜಿಲ್ಲೆಗಳು ಹೆಚ್ಚಿನ ಅಲರ್ಟ್ನಲ್ಲಿವೆ.
ಅಲ್ಲದೇ ಸಾಮಾಜಿಕ ಮಾಧ್ಯಮ ನಿಷೇಧ ಖಂಡಿಸಿ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ, ನೇಪಾಳದ ವಿವಿಧ ಜೈಲುಗಳಿಂದ ಕೈದಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. 18 ಜಿಲ್ಲೆಗಳಲ್ಲಿ 6,000 ಕ್ಕೂ ಹೆಚ್ಚು ಕೈದಿಗಳು ಜೈಲುಗಳಿಂದ ಪರಾರಿಯಾಗಿದ್ದಾರೆ. ಅನೇಕ ಸ್ಥಳಗಳಲ್ಲಿ ಕೈದಿಗಳು ಜೈಲಿನ ಬಾಗಿಲುಗಳನ್ನು ಮುರಿದಿದ್ದಾರೆ. ಈ ಘಟನೆಯು ದೇಶದಲ್ಲಿ ಈಗಾಗಲೇ ತಲೆದೋರಿರುವ ಅವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದಾಗಿ ಅಧಿಕಾರಿಗಳು ನಿಯಂತ್ರಣ ಪಡೆಯಲು ಹೆಣಗಾಡುತ್ತಿದ್ದಾರೆ.
Read Also : ನೇಪಾಳದಲ್ಲಿ ಹಿಂಸಾಚಾರ : ಪ್ರಧಾನಿ ಹುದ್ದೆಗೆ ಕೆ.ಪಿ. ಓಲಿ ರಾಜೀನಾಮೆ