ಇಷ್ಟು ದಿವಸ ರಾಜ್ಯದಲ್ಲಿ ವರುಣಾರ್ಭಟ ಮೀತಿ ಮೀರಿತ್ತು.. ರಾಜ್ಯದಲ್ಲಿ ಎಡಬಿಡದೆ ಸುರಿದ ಮಳೆಗೆ ಜನ ಹೈರಾಣಾ ಗಿದ್ರು.. ಸದ್ಯ ಕರುನಾಡಲ್ಲಿ ಮಳೆರಾಯ ಬ್ರೇಕ್ ನೀಡಿದ್ದು, ಈಶಾನ್ಯ ರಾಜ್ಯಗಳಲ್ಲಿ ಅಬ್ಬರಿಸುತ್ತಿದ್ದಾನೆ..
ಕೆಲದಿನಗಳಿಂದ ಈಶಾನ್ಯ ರಾಜ್ಯಗಳಲ್ಲಿ(flood & landslides in Northeast) ಭಾರಿ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ಅಸ್ಸಾಂ, ಅರುಣಾಚಲ ಪ್ರದೇಶ, ಮಿಜೋರಾಂ, ಮಣಿಪುರ ಸೇರಿದಂತೆ ಹಲವು ರಾಜ್ಯಗಳು ತತ್ತರಿಸಿವೆ. ನದಿಗಳು ಅಪಾಯದ ಮಟ್ಟ ಮಿರಿ ಹರಿಯುತ್ತಿವೆ..
ಹಠಾತ್ ಪ್ರವಾಹ, ಭೂಕುಸಿತದ ಘಟನೆಗಳಲ್ಲಿ 31ಕ್ಕೆ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಜನರು ನಿರಾಶ್ರಿತ ರಾಗಿದ್ದಾರೆ. ರಸ್ತೆ, ಸೇತುವೆಗಳು ಮತ್ತು ಮನೆಗಳು ಹಾನಿಗೊಳಗಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ..
ಮಳೆ ಸಂಬಂಧಿತ ಅವಘಡಕ್ಕೆ ಅಸ್ಸಾಂನಲ್ಲಿ 10, ಅರುಣಾಚಲ ಪ್ರದೇಶದಲ್ಲಿ 9, ಮೇಘಾಲಯದಲ್ಲಿ 6, ಮಿಜೋರಾಂ ನಲ್ಲಿ 5, ತ್ರಿಪುರಾ, ನಾಗಾಲ್ಯಾಂಡ್. ಸಿಕ್ಕಿಂನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ನೆರೆ ಹಾವಳಿಯಿಂದ ರಸ್ತೆ, ಸೇತುವೆ ಗಳು ಸೇರಿದಂತೆ ಮೂಲಸೌಕರ್ಯ ವ್ಯವಸ್ಥೆ ನಾಶವಾಗಿದೆ. ಪ್ರವಾಹದ ಅಬ್ಬರಕ್ಕೆ ಮನೆಗಳು ಕುಸಿದು ಬಿದ್ದಿವೆ. ಸಾವಿರಾ ರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಬಹುತೇಕ ರಾಜ್ಯಗಳಲ್ಲಿ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯವಾಗಿದೆ.