ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ NSUI ಆಕ್ಷೇಪ ವ್ಯಕ್ತಪಡಿಸಿದೆ. ಈ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಚಕ್ರವರ್ತಿ ಸೂಲಿಬೆಲೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೊಸ ಬಿರುದೊಂದನ್ನ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಲಿಬೆಲೆ ಚಕ್ರವರ್ತಿ ಸುಳ್ಳಿನ ಚಕ್ರವರ್ತಿ ಎಂದು ನಾಡಿನ ಜನತೆಗೆ ಗೊತ್ತಿದೆ. ಚಕ್ರವರ್ತಿ ಸೂಲೆಬೆಲೆ ತಮ್ಮ ಉಡುಪಿ ಪ್ರವಾಸದಲ್ಲಿ ಭಾಷಣ ಮಾಡದಂತೆ ಯಾರೂ ತಡೆಯುತ್ತಿಲ್ಲ, ಅದರೆ ಅವರು ಸುಳ್ಳಿನ ಚಕ್ರವರ್ತಿ ಎಂದು ನಾಡಿನ ಜನತೆಗೆ ಗೊತ್ತಿದೆ ಎಂದಿದ್ದಾರೆ.
ಉಡುಪಿಯ ಜನ ಶಾಂತಿಪ್ರಿಯರು, ಶಾಂತಿ ಕದಡುವ ಪ್ರಯತ್ನ ಅವರಿಂದ ನಡೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಚಕ್ರವರ್ತಿ ತಮ್ಮ ಮಾತುಗಳಲ್ಲಿ ಭಗವದ್ಗೀತೆ, ರಾಮಾಯಣದ ಉದಾಹರಣೆಗಳನ್ನು ಬಹಳ ಪ್ರಯೋಗಿಸುತ್ತಾರೆ.
Read Also : ಜಮೀರ್ ಇಲಾಖೆಯಲ್ಲಿ ಗೋಲ್ಮಾಲ್? ಜಮೀರ್ ಪಿಎಗೆ B.R Patil ಕ್ಲಾಸ್, ಆಡಿಯೋ ವೈರಲ್!?
ಕಪ್ಪನ್ನು ಬಿಳಿ ಮಾಡುವುದರಲ್ಲಿ ಮತ್ತು ಬಿಳಿಯನ್ನು ಕಪ್ಪು ಮಾಡುವುದರಲ್ಲಿ ಅವರು ಪರಿಣಿತರು ಎಂದು ಸಚಿವೆ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು. ನಮ್ಮ ಸರ್ಕಾರ ಯಾರ ವಾಕ್ ಸ್ವಾತಂತ್ರ್ಯಕ್ಕೂ ಅಡ್ಡಿ ಬರಲ್ಲ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದರು.