Close Menu
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

Subscribe to Updates

Get the latest creative news from FooBar about art, design and business.

What's Hot

ಕಾಂತಾರ ಚಾಪ್ಟರ್ 1 ಚಿತ್ರೀಕರಣದ ವೇಳೆ ಮತ್ತೊಂದು ಅವಘಡ

June 15, 2025

Israel-Iran Conflict : ದಾಳಿಗೆ ಪ್ರತೀದಾಳಿ, ಇಸ್ರೇಲ್‌ ಒಳಗೆ ನುಗ್ಗಿ ಹೊಡೆದ ಇರಾನ್!

June 14, 2025

ಬ್ಲ್ಯಾಕ್‌ಬಾಕ್ಸ್‌ ಬಗ್ಗೆ ಏವಿಯೇಷನ್‌ ಮಿನಿಸ್ಟರ್‌ ಏನಂದ್ರು?

June 14, 2025
Facebook X (Twitter) Instagram
Subscribe
BosstvKannada
Facebook X (Twitter) Instagram YouTube
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ
BosstvKannada
  • Viral News
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕರ್ನಾಟಕ
  • ದೇಶ
  • ಕ್ರಿಕೆಟ್​
  • ಸಿನಿಮಾ
  • ಇತರೆ

ಶೋಕಾಚರಣೆಗೆ ಕಾರಣವಾದ ನಮ್ಮಆರ್‌ಸಿಬಿ ಕಪ್‌: ಬಲಿಯಾದ್ವು 11 ಜೀವ

0
By ashwini ashok on June 5, 2025 ಕರ್ನಾಟಕ
Share
Facebook Twitter LinkedIn WhatsApp Copy Link

ನಿನ್ನೆ ನಡೆಬಾರದ ಘಟನೆ ರಾಜ್ಯದಲ್ಲಿ ನಡೆದಿದೆ.. ಆರ್‌ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಯಾರ್‌ ಕಣ್ಣ್‌ ಬಿತ್ತೋ ಏನೋ.. ಮುಗಿಲು ಮುಟ್ಟಿದ್ದ ಆರ್‌ಸಿಬಿ ಫ್ಯಾನ್ಸ್‌ಗಳ ಸಂಭ್ರಮಕ್ಕೆ ನಿನ್ನೆ ಬರಸಿಡಿಲು ಬಡಿದಂತೆ ಆಗಿತ್ತು. ಚಿನ್ನಸ್ವಾಮಿ ಮೈದಾನಕ್ಕೆ ಬಂದಿದ್ದ ತಮ್ಮ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ನಾ ಮುಂದು, ತಾ ಮುಂದು ಅಂತ ಓಡೋದಕ್ಕೆ ಶುರು ಮಾಡಿದ್ದಾರೆ.

ಇದೇ ವೇಳೆ ಯಾರು ಊಹಿಸಲಾರದ ಘಟನೆ ನಡೆದು ಹೋಗಿದೆ. ಆರ್‌ಸಿಬಿ ಕಪ್‌ ಗೆದ್ದಿರೋ ಸಂಭ್ರಮ ಒಂದ್ಕಡೆಯಾದ್ರೆ. ಹೆತ್ತವರ ಆಕ್ರಂದನ, ಗೋಳಾಟ ಮತ್ತೊಂದೆಡೆ.. ಸಂಭ್ರಮದಿಂದ ಇರಬೇಕಾಗಿದ್ದ ರಾಜ್ಯವು ಸದ್ಯ ಸೂತಕದ ಮನೆ ಯಾಗಿದೆ.. ಕಪ್‌ ಸಂಭ್ರಮ ತಂದಿದ್ದು, ಎಷ್ಟು ನಿಜವೋ.. ಅದರ ದುಪ್ಪಟ್ಟು ಮರೆಯಲಾಗದ ನೋವನ್ನ ಇಡೀ ರಾಜ್ಯಕ್ಕೆ ಕೊಟ್ಟಿದೆ..

ಇಡೀ ರಾಜ್ಯಕ್ಕೆ ಈ ಸಲದ ನಮ್ಮ ಆರ್‌ಸಿಬಿ ಕಪ್‌ ಅತೀವ ದುಖಃ ತಂದಿದೆ.. ಕಪ್‌ ಗೆದ್ದ ಸಂತಸದ ಆರ್‌ಸಿಬಿ ಆರ್‌ಸಿಬಿ ಕೂಗಿನ ಮರುಕ್ಷಣವೇ ಸ್ಥಳದಲ್ಲಿ ಕೇಳಿಸಿದ್ದು ಆಂಬ್ಯುಲೆನ್ಸ್‌ ಸೌಂಡ್‌.. ಏನಾಯಿತು ಅಂತ ಕೇಳಷ್ಟರಲ್ಲೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಹೋಗಿತ್ತು ಹತ್ತಾರು ಫ್ಯಾನ್ಸ್‌ಗಳ ಜೀವ.. ಜವರಾಯನ ಅಟ್ಟಹಾಸಕ್ಕೆ ಅಮಾಯಕ ಯುವಕರು ಬಲಿಯಾಗಿದ್ದು ದುರಂತ.. ಸ್ಟೇಡಿಯಂ ಬಳಿ ಹೊಕ್ಕಿ ಕೂತಿದ್ದ ಜವರಾಯನ ಕೇಕೆಗೆ ಬಲಿಯಾದ್ವು ೧೧ ಜೀವ..

ಏಕಾಏಕಿ ಚಿನ್ನಸ್ವಾಮಿ ಮೈದಾನಕ್ಕೆ ಅಪಾರ ಅಭಿಮಾನಿಗಳು ಹರಿದು ಬಂದ ಪರಿಣಾಮ ಏಕಾಏಕಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ ಘೋರ ದುರಂತದಲ್ಲಿ 11 ಮಂದಿ ಅಮಾಯಕರು ತಮ್ಮ ಪ್ರಾಣವನ್ನೇ ಕಳೆದು ಕೊಂಡಿದ್ದು, ನಿನ್ನೆಯ ದಿನ ರಾಜ್ಯಕ್ಕೆ ಕರಾಳ ಬುಧವಾರವಾಗಿದೆ.

ಭೂಮಿಕ್
ಭೂಮಿಕ್

ನೆಚ್ಚಿನ ಆರ್​ಸಿಬಿ ಆಟಗಾರರನ್ನು ನೋಡೋಕೆ ಅಂತ ಬಂದಿದ್ದ ಭೂಮಿಕ್ ಕಾಲ್ತುಳಿತದಲ್ಲಿ ಉಸಿರು ಚೆಲ್ಲಿದ್ದಾರೆ. ನಾಗಸಂದ್ರ ಮೂಲದ ಭೂಮಿಕ್ (20)​, ಫ್ರೆಂಡ್ಸ್​ ಜೊತೆ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದ. ಆತನ ಎಲ್ಲಾ ಸ್ನೇಹಿತ ರು ಕ್ರೀಡಾಂಗಣದ ಒಳಗೋದ್ರೆ, ಭೂಮಿಕ್ ಮಾತ್ರ ಆಚೆಗೆ ಸಿಲುಕಿಕೊಂಡಿದ್ದ, ಆದರೆ ಇದೇ ವೇಳೆ ನಡೆದ ಕಾಲ್ತುಳಿತ ದಲ್ಲಿ ಜೀವಬಿಟ್ಟಿದ್ದಾನೆ.

ಅಕ್ಷತಾ
ಅಕ್ಷತಾ

RCB ಅಭಿಮಾನಿಗಳ​ ನಡುವೆ ನೂಕುನುಗ್ಗಲು ವೇಳೆ ಉತ್ತರ ಕನ್ನಡ ಜಿಲ್ಲೆಯ ಅಕ್ಷತಾ ಸಾವನ್ನಪ್ಪಿದ್ದಾರೆ. ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಅಕ್ಷತಾ ಹಾಗೂ ಪತಿ ಆಶಯ್ ಇಬ್ಬರು ಬೆಂಗಳೂರು ನಗರದ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ರು. ಇಬ್ಬರು ಒಟ್ಟಿಗೆ ಸ್ಟೇಡಿಯಂಗೆ ಬಂದಿದ್ರು. ಈ ವೇಳೆ ಕಾಲ್ತುಳಿತವಾಗಿ ಗಂಡನ ಎದುರೆ ಪತ್ನಿ ಪ್ರಾಣ ಬಿಟ್ಟಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಅಕ್ಷತಾ ಮರಣೋತ್ತರ ಪರೀಕ್ಷೆ ಅಂತ್ಯಗೊಂಡಿದ್ದು, ಕುಟುಂಬಸ್ಥರಿಗೆ ಮೃತದೇಹವನ್ನ ಹಸ್ತಾಂತರಿಸಲಾಗಿದೆ.

ಸಹನಾ
ಸಹನಾ

ಕಾಲ್ತುಳಿತದಲ್ಲಿ ಕೋಲಾರ ಮೂಲದ ಯುವತಿ ಸಾವನ್ನಪ್ಪಿದ್ದಾಳೆ. ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿ ಗ್ರಾಮದ ಸುರೇಶ ಬಾಬು ಮತ್ತು ಮಂಜುಳಾ ಅವರ ಪುತ್ರಿ ಸಹನಾ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ಲು. RCB ಸೆಲಬ್ರೇಷನ್ ನೋಡಲು ಸ್ನೇಹಿತರ ಜೊತೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ಲು. ಆದ್ರೆ ಕಾಲ್ತುಳಿತದಲ್ಲಿ ಜೀವಬಿಟ್ಟಿದ್ದಾಳೆ. ಸದ್ಯ ಸಹನಾ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರಿಸಲಾಗಿದೆ. ಸಹನಾ ಮೃತದೇಹವನ್ನು ಕೋಲಾರ ನಗರದ ಎಸ್.ಜಿ. ಬಡಾವಣೆಯಲ್ಲಿ ಇರುವ ನಿವಾಸ ಕೊಂಡೊಯ್ಯಲಾಗಿದೆ. ಸಹನಾ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಪ್ರಜ್ವಲ್
ಪ್ರಜ್ವಲ್

ಚಿನ್ನಸ್ವಾಮಿ ಕ್ರಿಡಾಂಗಣದ ಬಳಿ ನೂಕು ನುಗ್ಗಲು ಉಂಟಾಗಿ ಚಿಕ್ಕಬಳ್ಳಾಪುರದ ಪ್ರಜ್ವಲ್ ನಿಧನರಾಗಿದ್ದಾರೆ. ಇಂಜಿನಿಯರಿಂಗ್ ಮುಗಿಸಿ ನಿನ್ನೆ ಒಂದು ಖಾಸಗಿ ಕಂಪನಿಯಲ್ಲಿ ಇಂಟರ್​ ವ್ಯೂ ಮುಗಿಸಿದ್ದರು. ಪ್ರಜ್ವಲ್ ವಿಜಯೋತ್ಸವಕ್ಕೆ ಹೋಗಿದ್ದು ಮನೆಯವರಿಗೆ ಗೊತ್ತಿರಲಿಲ್ಲ. ಟಿವಿ ನೋಡಿ ಮನೆಯವರೇ ಅಭಿಮಾನಿಗಳಿಗೆ ಬೈಯ್ತಿದ್ರಂತೆ. ಸುಮ್ಮನೆ ಜನ ಇಲ್ಲಿಗೆ ಎಲ್ಲಾ ಹೋಗಿದ್ದಾರೆ ಅಂತ. ಆದ್ರೆ ತಮ್ಮ ಮಗ ಕೂಡ ಸ್ಟೇಡಿಯಂಗೆ ಹೋಗಿದ್ದ ಅನ್ನೋದು ಪ್ರಜ್ವಲ್ ಸಾವಿನ ಸುದ್ದಿ ತಿಳಿದ ತಕ್ಷಣವೇ ಗೊತ್ತಾಗಿದ್ದು. ಸದ್ಯ, ಮರಣೋತ್ತರ ಪರೀಕ್ಷೆ ನಡೆಸಿ ಪ್ರಜ್ವಲ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ದಿವ್ಯಾನ್ಷಿ
ದಿವ್ಯಾನ್ಷಿ

ಕಾಲ್ತುಳಿತ ದುರಂತದಲ್ಲಿ 14 ವರ್ಷದ ಬಾಲಕಿ ದಿವ್ಯಾನ್ಷಿ ಮೃತಪಟ್ಟಿದ್ದಾರೆ. ಯಲಹಂಕ ಕಣ್ಣೂರಿನ ನಿವಾಸಿ ಶಿವಕುಮಾರ್, ಅಶ್ವಿನಿ ದಂಪತಿ‌ ಮಗಳಾದ ದಿವ್ಯಾನ್ಷಿ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಳು. ದಿವ್ಯಾನ್ಷಿ ಚಿನ್ನಸ್ವಾಮಿ ಸ್ಟೇಡಿಯಂಗೆ ಚಿಕ್ಕಮ್ಮ ರಚನಾ ಇನ್ನಿಬರ ಜೊತೆ ಬಂದಿದ್ರು. ದಿವಾನ್ಷಿ ಕಾಲ್ತುಳಿತಕ್ಕೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿದ್ಯಾರ್ಥಿ ಶಿವಲಿಂಗ
ವಿದ್ಯಾರ್ಥಿ ಶಿವಲಿಂಗ

ದ್ವಿತೀಯ ಪಿಯುಸಿಗೆ ಸೇರಲು ಟಿಸಿ ತರಲು ಬಂದಿದ್ದ ವಿದ್ಯಾರ್ಥಿ ಶಿವಲಿಂಗ ಕಾಲ್ತುಳಿತಕ್ಕೆ ಸಿಲುಕಿ ಪ್ರಾಣಬಿಟ್ಟಿದ್ದಾನೆ. ಯಾದಗಿರಿಯ ರಾಮಸಂದ್ರ ಮೂಲದ ವಿದ್ಯಾರ್ಥಿ ಶಿವಲಿಂಗ, ಯಲಹಂಕ ಕಣ್ಣೂರಿನಲ್ಲಿ ವಾಸವಾಗಿದ್ದರು. ತಂದೆ ತಾಯಿ ಇಬ್ಬರು ಗಾರೆ ಕೆಲಸ ಮಾಡಿ ಶಿವಲಿಂಗನನ್ನ ಓದಿಸುತ್ತಿದ್ದರು, ಆದ್ರೆ, ಟಿಸಿ ತರಲು ಬೆಂಗಳೂರಿಗೆ ಬಂದಿದ್ದ ಶಿವಲಿಂಗ ಆರ್​ಸಿಬಿಯ ವಿಜಯೋತ್ಸವವನ್ನ ಕಣ್ತುಂಬಿಕೊಳ್ಳಲು ನೇರವಾಗಿ ಸ್ಟೇಡಿಯಂಗೆ ಬಂದಿದ್ದಾನೆ. ಈ ವೇಳೆ ಕಾಲ್ತುಳಿತಕ್ಕೆ ಸಿಲುಕಿ ದುರಂತ ಅಂತ್ಯ ಕಂಡಿದ್ದಾನೆ. ಬೌರಿಂಗ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಯಾದಗಿರಿಯ ರಾಮಸಂದ್ರ ಗ್ರಾಮಕ್ಕೆ ಮೃತದೇಹ ರವಾನಿಸಲಾಗುತ್ತದೆ.

ಪೂರ್ಣಚಂದ್ರ
ಪೂರ್ಣಚಂದ್ರ

ಮಂಡ್ಯದಿಂದ ಸೆಲಬ್ರೇಷನ್​ ನೋಡಲು ಬಂದಿದ್ದ 26 ವರ್ಷದ ಪೂರ್ಣಚಂದ್ರ ಕೂಡ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾನೆ. ಕೆ.ಆರ್ ಪೇಟೆ ರಾಯಸಮುದ್ರದ ನಿವಾಸಿಯಾಗಿರೋ ಪೂರ್ಣಚಂದ್ರ ಸಿವಿಲ್ ಇಂಜಿನಿಯರ್ ಕೆಲಸ ಮಾಡ್ತಿದ್ದ. ಕಾಲ್ತುಳಿತದಲ್ಲಿ ಅಸ್ವಸ್ಥನಾಗ್ತಿದ್ದಂತೆ ಸಿಪಿಆರ್​ ನೀಡಲಾಯ್ತು. ಆದ್ರೂ ಪೂರ್ಣಚಂದ್ರ ಬದುಕುಳಿಲಿಲ್ಲ. ಸದ್ಯ ಪೂರ್ಣಚಂದ್ರ ಮೃತದೇಹ ಹುಟ್ಟೂರು ತಲುಪಿದೆ. ಮಗನ ದೇಹವನ್ನು ನೋಡಿದ ಕುಟುಂಬಸ್ಥರು ಕಣ್ಣೀರು ಇಡುತ್ತಿದ್ದಾರೆ.

ಕಾಲ್ತುಳಿತದಲ್ಲಿ ತಮಿಳುನಾಡಿನ ಕೊಯಮತ್ತೂರಿನ ದೇವಿ ಎಂಬುವವರು ನಿಧನರಾಗಿದ್ದಾರೆ. ಇವರು ದೇವಿ (29) ಬೆಂಗಳೂರಿನ ರಾಮಮೂರ್ತಿನಗರದಲ್ಲಿ ವಾಸವಾಗಿದ್ದರು. ಇದೀಗ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ತಮಿಳುನಾಡಿನ ಕೊಯಮತ್ತೂರಿಗೆ ಮೃತದೇಹ ರವಾನಿಸಲಾಗುತ್ತದೆ. ಆದ್ರೆ ಮೃತ ದೇವಿ ಫೋಟೋ ಲಭ್ಯವಾಗಿಲ್ಲ.

ಬೆಂಗಳೂರಿನಲ್ಲಿ ಕಾಲ್ತುಳಿತದಲ್ಲಿ ಅಂಬೇಡ್ಕರ್ ಕಾಲೇಜಿನ ಡೆಂಟಲ್ ವಿದ್ಯಾರ್ಥಿ ಶ್ರವಣ್ (20) ಮೃತಪಟ್ಟಿದ್ದಾನೆ. ವಿದ್ಯಾರ್ಥಿ ಮೃತದೇಹ ಚಿಕ್ಕಬಳ್ಳಾಪುರದ ಚಿಂತಾಮಣಿಯ ಕುರುಟಹಳ್ಳಿ ಗ್ರಾಮವನ್ನ ತಲುಪಿದೆ. ಮೃತದೇಹ ಮನೆಗೆ ಬರ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಚಿನ್ಮಯಿ ಶೆಟ್ಟಿ
ಚಿನ್ಮಯಿ ಶೆಟ್ಟಿ

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಯಕ್ಷ ಕಲಾವಿದೆ ಆಗಿರೋ ಬಹುಮುಖಿ ಪ್ರತಿಭೆ ಚಿನ್ಮಯಿ ಶೆಟ್ಟಿ ಜೀವಬಿಟ್ಟಿದ್ದಾಳೆ. ಇವರು ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಕೂಡ ಆಗಿದ್ದರು. ‘ಯಕ್ಷತರಂಗ ಬೆಂಗಳೂರು’ ರಲ್ಲಿ ಯಕ್ಷಗಾನ ಕಲಿಯುತ್ತಿದ್ದರು. ಮುದ್ದಾದ ಮಗಳ ಮೇಲೆ ಪೋಷಕರು ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದರು. ಆದ್ರೆ ಮುದ್ದಾದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಮನೋಜ್
ಮನೋಜ್

ಕಾಲ್ತುಳಿತದಲ್ಲಿ ಪಾನಿಪುರಿ ವ್ಯಾಪಾರಿಯ ಮಗ ಮನೋಜ್ ಎಂಬುವವರು ಜೀವಬಿಟ್ಟಿದ್ದಾರೆ. ಇವರ ತಂದೆ ಪಾನಿಪುರಿ ಮಾರಾಟ ಮಾಡಿ ಮಗನನ್ನ ಓದಿಸುತ್ತಿದ್ದರಂತೆ. ಬೆಂಗಳೂರಿನ ಯಲಹಂಕದ ರೆಸಿಡೆನ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ. ಮೂಲತಃ ತುಮಕೂರಿನ ಕುಣಿಗಲ್​ನ ಯಡಿಯೂರಿನವರಾಗಿದ್ದಾರೆ.

Share. Facebook Twitter Pinterest LinkedIn WhatsApp Email
Previous ArticleRCB ಅಭಿಮಾನಿಗಳ ಕಾಲ್ತುಳಿತ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್!
Next Article Bengaluru stampede : RCB ಫ್ರ್ಯಾಂಚೈಸಿ, KSCA ಹಾಗೂ ಡಿಎನ್‌ಎ ಮ್ಯಾನೇಜ್‌ಮೆಂಟ್ ವಿರುದ್ಧ FIR

Related Posts

Rain In karwar : ರಾಜ್ಯದಲ್ಲಿ ವರುಣಾರ್ಭಟ, ಕಾರವಾರದಲ್ಲಿ ಗುಡ್ಡಕುಸಿತ

June 13, 2025 ಕರ್ನಾಟಕ
Leave A Reply Cancel Reply

Latest news

ಕಾಂತಾರ ಚಾಪ್ಟರ್ 1 ಚಿತ್ರೀಕರಣದ ವೇಳೆ ಮತ್ತೊಂದು ಅವಘಡ

June 15, 2025

Israel-Iran Conflict : ದಾಳಿಗೆ ಪ್ರತೀದಾಳಿ, ಇಸ್ರೇಲ್‌ ಒಳಗೆ ನುಗ್ಗಿ ಹೊಡೆದ ಇರಾನ್!

June 14, 2025

ಬ್ಲ್ಯಾಕ್‌ಬಾಕ್ಸ್‌ ಬಗ್ಗೆ ಏವಿಯೇಷನ್‌ ಮಿನಿಸ್ಟರ್‌ ಏನಂದ್ರು?

June 14, 2025

ಸಿದ್ದರಾಮಯ್ಯ ಸರ್ಕಾರದ ಕುತಂತ್ರಗಳಿಗೆ ರಾಜ್ಯ ಬಿಜೆಪಿ ಹೆದರಲ್ಲ, ಬಗ್ಗಲ್ಲ : ಬಿ.ವೈ ವಿಜಯೇಂದ್ರ

June 14, 2025
Our Picks
Don't Miss
ಸಿನಿಮಾ

ಕಾಂತಾರ ಚಾಪ್ಟರ್ 1 ಚಿತ್ರೀಕರಣದ ವೇಳೆ ಮತ್ತೊಂದು ಅವಘಡ

By ashwini ashokJune 15, 20251 Min Read

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಸಿನಿಮಾ ತಂಡಕ್ಕೆ ಶಾಕ್​ ಮೇಲೆ ಶಾಕ್​ ಎದುರಾಗುತ್ತಿದೆ. ಮೊನ್ನೆಯಷ್ಟೇ…

Israel-Iran Conflict : ದಾಳಿಗೆ ಪ್ರತೀದಾಳಿ, ಇಸ್ರೇಲ್‌ ಒಳಗೆ ನುಗ್ಗಿ ಹೊಡೆದ ಇರಾನ್!

June 14, 2025

ಬ್ಲ್ಯಾಕ್‌ಬಾಕ್ಸ್‌ ಬಗ್ಗೆ ಏವಿಯೇಷನ್‌ ಮಿನಿಸ್ಟರ್‌ ಏನಂದ್ರು?

June 14, 2025

ಸಿದ್ದರಾಮಯ್ಯ ಸರ್ಕಾರದ ಕುತಂತ್ರಗಳಿಗೆ ರಾಜ್ಯ ಬಿಜೆಪಿ ಹೆದರಲ್ಲ, ಬಗ್ಗಲ್ಲ : ಬಿ.ವೈ ವಿಜಯೇಂದ್ರ

June 14, 2025
Facebook X (Twitter) Instagram YouTube
© 2025 Boss Tv . All right reserved. Developed by VikimediaTec Private Limited.

Type above and press Enter to search. Press Esc to cancel.

Sign In or Register

Welcome Back!

Login to your account below.

Lost password?