PM Pakistan Shehbaz Sharif: ಪಾಕಿಸ್ತಾನದಾದ್ಯಂತ ಭಾರತದ ಪರಾಕ್ರಮ ಪ್ರತಿಧ್ವನಿಸಿದೆ. ಭಾರತೀಯ ಸೇನೆಗಳ ರೌದ್ರಾವತಾರಕ್ಕೆ ಇಡೀ ಪಾಕಿಸ್ತಾನವೇ ಸುಟ್ಟು ಭಸ್ಮವಾಗಿದೆ. ಭಾರತದ ಆಪರೇಷನ್ ಸಿಂದೂರ್ ಪಾಕ್ ಪಾಲಿಗೆ ರಕ್ತದೋಕುಳಿಯಾಗಿದ್ದು, ಇಡೀ ಪಾಪಿಸ್ತಾನದಲ್ಲಿ ಅಲ್ಲೋಲ ಕಲ್ಲೋಲವಾಗಿದೆ.
ಭಾರತದ ಮೂರು ಸೇನೆಗಳ ಅಟ್ಯಾಕ್ಗೆ ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯೇ ನಾಶವಾಗಿದ್ದು, ಸೈನಿಕರು, ನಾಯಕರು ವಿಲವಿಲ ಒದ್ದಾಡ್ತಿದ್ದಾರೆ. ಪಾಕಿಸ್ತಾನಕ್ಕೇ ನುಗ್ಗಿ ಹೊಡೆಯುತ್ತಿರುವ ಸೇನೆ ಲಾಹೋರ್, ಖರಾಚಿ, ಸಿಯಾಲ್ಕೋಟ್ ಸ್ಥಳಗಳನ್ನ ಸುಟ್ಟು ಭಸ್ಮ ಮಾಡಿದೆ.
ಇಂಡಿಯನ್ ಆರ್ಮಿ ಇಸ್ಲಮಾಬಾದ್ನಲ್ಲಂತೂ ಬೆಂಕಿಯ ಮಳೆ ಸುರಿಸಿದೆ. ಪಾಕ್ ಪ್ರಧಾನಿ ಮನೆಯಿಂದ ಕೇವಲ 20 ಕಿಲೋ ಮೀಟರ್ ಅಂತರದಲ್ಲಿ ವೈಮಾನಿಕ ದಾಳಿ ಮಾಡಲಾಗಿದೆ. ಭಾರತದ ಶಕ್ತಿ ಪ್ರದರ್ಶನಕ್ಕೆ ಪಾಕ್ ಪ್ರಧಾನಿ ಶಹಬಾಜ್ ಷರೀಷ್ ವಿಲವಿಲ ಒದ್ದಾಡಿ ರಹಸ್ಯ ಅಡಗುತಾಣಕ್ಕೆ ಓಡಿಹೋಗಿದ್ದಾರೆ.
Also Read: Operation Sindoor 2.0 : ಭಾರತೀಯ ಸೈನಿಕರ ಆರ್ಭಟಕ್ಕೆ ಕರಾಚಿ ನಗರ ಧ್ವಂಸ!
ಇದೀಗ ಪಾಕ್ ಪ್ರಧಾನಿ ಇರುವ ಅಡಗುತಾಣದ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಇತ್ತ ನಾಯಕನಿಲ್ಲದೇ ಅನಾಥವಾಗಿರುವ ಪಾಕಿಸ್ತಾನದಲ್ಲಿ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ನನ್ನು ವಜಾ ಮಾಡಿ ನೂತನ ಸೇನಾ ಮುಖ್ಯಸ್ಥನನ್ನ ನೇಮಕ ಮಾಡಲಾಗಿದೆ ಅಂತ ಹೇಳಲಾಗ್ತಿದೆ..

