ಬೆಂಗಳೂರಿನ ಹೆಬ್ಬಾಳ ನೂತನ ಮೇಲ್ಸೆತುವೆಯನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಕೆಆರ್ ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆ ಸಾಗುವ ವಾಹನಗಳ ಸುಗಮ ಸಂಚಾರಕ್ಕೆ ಹೆಬ್ಬಾಳ ಮೇಲ್ಸೇತುವೆಯನ್ನು ಇಂದು ಚಾಲನೆ ನೀಡಲಾಯಿತು. ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಆರ್.ಪುರಂ ಕಡೆಯಿಂದ ಮೇಖ್ರಿ ವೃತ್ತ ಸಂಪರ್ಕಿಸುವ ನೂತನ ಮೇಲ್ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ಬಳಿಕ ಡಿಸಿಎಂ ಡಿಕೆಶಿವಕುಮಾರ್‌ ಫ್ಲೈಓವರ್‌ ಮೇಲೆ ಒಂದು ರೌಂಡ್‌ ಬೈಕ್ ರೈಡ್ ಮಾಡಿದರು. ಬುಲೆಟ್‌ ಹತ್ತಿದ ಡಿಸಿಎಂ ಡಿಕೆಶಿಗೆ ಸಿಎಂ ಸಿದ್ದರಾಮಯ್ಯ ಗ್ರೀನ್‌ ಫ್ಲ್ಯಾಗ್‌ನಿಂದ ಚಾಲನೆ ನೀಡಿದರು.

ಜಾಲಿಯಾಗಿ ಬೈಕ್‌ ರೈಡ್‌ ಮಾಡಿರುವ ಡಿಕೆಶಿ, ತಮ್ಮ ಕಾಲೇಜಿನ ದಿನಗಳನ್ನ ಮತ್ತೆ ನೆನಪಿಸಿಕೊಳ್ಳುತ್ತೀದ್ದೇನೆ ಎಂದು ಹೇಳಿದರು. ಹೀಗೆ ಡಿಕೆಶಿ ತಮ್ಮ ಕಾಲೇಜಿನ ದಿನಗಳನ್ನ ಮೆಲುಕು ಹಾಕಿದ್ದಾರೆ. ಇನ್ನು ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ನಂತರ ಮಾತನಾಡಿದ ಅವರು, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಬದ್ಧತೆ ಇಟ್ಟುಕೊಂಡಿರುವ ನಮ್ಮ ಸರ್ಕಾರವು ಮೇಲ್ಸೇತುವೆಗಳು, ಮೆಟ್ರೋ ಕಾಮಗಾರಿಗಳು ಸೇರಿದಂತೆ ಪ್ರಯಾಣಿಕರಿಗೆ ಸಿಗ್ನಲ್ ಫ್ರೀ ಸಂಚಾರ ವ್ಯವಸ್ಥೆ ಕಲ್ಲಿಸಿಕೊಡಲು ಶಕ್ತಿಮೀರಿ ಶ್ರಮಿಸುತ್ತಿದೆ ಎಂದರು.

80 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಫ್ಲೈಓವರ್ ಸುಮಾರು 700 ಮೀಟರ್ ಉದ್ದವಿದೆ. ಕಾರ್ಯಕ್ರಮದ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಭೈರತಿ ಸುರೇಶ್, ಕೃಷ್ಣಭೈರೇಗೌಡ ಶಾಸಕರಾದ ಎಸ್ ಆರ್ ವಿಶ್ವನಾಥ್ , ಹ್ಯಾರಿಸ್ ಉಪಸ್ಥಿತರಿದ್ದರು.

Share.
Leave A Reply