Site icon BosstvKannada

ಆರೋಪಿ ದರ್ಶನ್‌, ಪವಿತ್ರ ಬೇಲ್‌ ಕ್ಯಾನ್ಸಲ್‌.. ಜಾಮೀನು ರದ್ದುಗೊಳಿಸಿ ʼಸುಪ್ರಿಂʼ ತೀರ್ಪು..!

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ಪವಿತ್ರಗೌಡಗೆ ಮತ್ತೆ ಸಂಕಷ್ಟ ಎದುರಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಬ್ಬಾ ಸುಬ್ಬಿ ಜೈಲು ಸೇರುವಂತಾಗಿದೆ. ಈ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್‌ ರದ್ದು ಪಡಿಸಿ ಶಾಕ್‌ ಕೊಟ್ಟಿದೆ.. ದರ್ಶನ್, ಪವಿತ್ರಾಗೌಡ ಹಾಗೂ ಇತರೆ ಆರೋಪಿಗಳ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾ.ಜೆ ಬಿ ಪಾರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ನಡೆದಿತ್ತು. ವಾದ, ಪ್ರತಿವಾದ ಆಲಿಸಿದ್ದ ಪೀಠ ಆದೇಶವನ್ನು ಕಾಯ್ದಿರಿಸಿತ್ತು.

ಸುಪ್ರೀಂಕೋರ್ಟ್‌ನಿಂದ ಜಾಮೀನು ರದ್ದು

ಇದೀಗ ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್‌, ದರ್ಶನ್, ಪವಿತ್ರಗೌಡ, ವಿನಯ್‌, ಪ್ರದೋಷ್‌, ಅನುಕುಮಾರ್‌, ನಾಗರಾಜು, ಲಕ್ಷ್ಮಣ್‌ ಹಾಗೂ ಜಗದೀಶ್‌ ಬೇಲ್‌ ರದ್ದುಗೊಳಿಸಿದೆ.. ತಕ್ಷಣವೇ ಈ ಎಲ್ಲಾ ಆರೋಪಿಗಳನ್ನು ಶರಣಾಗುವಂತೆ ಕೋರ್ಟ್‌ ಆದೇಶಿಸಿದೆ. ಆರೋಪಿಗಳಿಗೆ ಫೈವ್‌ ಸ್ಟಾರ್‌ ಟ್ರೀಟ್ಮೆಂಟ್‌ ನೀಡಲಾಗಿದೆ. ಆರೋಪಿ ಜೈಲಿನ ಲಾನ್‌ನಲ್ಲಿ ಕುಳಿತು ಸಿಗರೇಟ್‌ ಸೇದಿದ್ದಾನೆ.. ಜೈಲಿನ ಅಧಿಕಾರಿಯನ್ನು ಸಸ್ಪೆಂಡ್‌ ಮಾಡಬೇಕಿತ್ತು ಅಂತಾ ಕೋರ್ಟ್‌ ಅಭಿಪ್ರಾಯ ಪಟ್ಟಿದೆ. ಇನ್ಮುಂದೆ ದರ್ಶನ್‌ಗೆ ರಾಜಾತಿಥ್ಯ ನೀಡುವಂತಿಲ್ಲ ಅಂತಲೂ ಕೋರ್ಟ್‌ ಆದೇಶಿಸಿದೆ.

ಬೇಲ್‌ ಕ್ಯಾನ್ಸಲ್‌ ಆಗಿದ್ದು ಯಾಕೆ..?

ಕಳೆದ ವಿಚಾರಣೆ ವೇಳೆ ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಹೈಕೋರ್ಟ್ ಆದೇಶದಲ್ಲಿ ಚಡಪಡಿಕೆ ಎದ್ದು ಕಾಣುತ್ತಿದೆ. ಜಾಮೀನು ನೀಡಲು ಹೇಗಾದ್ರೂ ಒಂದು ಅಂಶ ಸಿಗಲಿ ಎನ್ನುವ ಚಡಪಡಿಕೆ ಕಾಣುತ್ತಿದೆ. ಹೈಕೋರ್ಟ್‌ ಸೂಕ್ತವಾಗಿ ತನ್ನ ವಿವೇಚನೆ ಬಳಸಿಲ್ಲ ಎಂದು ನ್ಯಾ.ಪಾರ್ದಿವಾಲ ಅಭಿಪ್ರಾಯಪಟ್ಟಿದ್ದರು. ಇದೀಗ ಆದೇಶ ಪ್ರಟಿಸಿರುವ ಕೋರ್ಟ್‌, ಬೇಲ್‌ ರದ್ದು ಪಡಿಸಿದೆ. ಹೀಗಾಗಿ, ದರ್ಶನ್‌ ಸೇರಿ 7 ಆರೋಪಿಗಳು ತಕ್ಷಣವೇ ಜೈಲಿಗೆ ಶರಣಾಗಬೇಕಾಗಿದೆ. ‌ದರ್ಶನ್‌ ಬಳ್ಳಾರಿ ಜೈಲಿಗೆ ಹಾಜರಾಗಬೇಕಿದ್ದು, ಯಾವಾಗ ಎಷ್ಟೊತ್ತಿಗೆ ಜೈಲಿಗೆ ಶರಣಾಗುತ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ..

Exit mobile version